Advertisement

ಮುಂಬಯಿಯಲ್ಲಿ ಮತ್ತೆ ಜಡಿ ಮಳೆ ಆರಂಭ: ವಿಮಾನ ಸೇವೆ ತೀವ್ರ ಬಾಧಿತ

09:57 AM Jul 09, 2019 | Team Udayavani |

ಮುಂಬಯಿ : ಇಂದು ಸೋಮವಾರ ನಸುಕಿನಿಂದ ಮುಂಬಯಿ ಮಹಾನಗರಿಯಲ್ಲಿ ಸುರಿಯಲಾರಂಭಿಸಿರುವ ಜಡಿ ಮಳೆಯ ಕಾರಣ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ, ಆಗಮನ, ನಿರ್ಗಮನ ತೀವ್ರವಾಗಿ ಬಾಧಿತವಾಗಿದೆ.

Advertisement

ನಿನ್ನೆ ಭಾನುವಾರ ರಾತ್ರಿಯಿಂದಲೇ ವಿಮಾನ ನಿಲ್ದಾಣದಲ್ಲಿನ ಕಾರ್ಯಾಚರಣೆಗಳನ್ನು ಪ್ರತಿಕೂಲ ಹವಾಮಾನದ ಕಾರಣ ಸ್ಥಗಿತಗೊಳಿಸಲಾಗಿತ್ತು. ಇಂದು ಸೋಮವಾರ ನಸುಕಿನ ವೇಳೆಯಿಂದ ತೀವ್ರ ಜಡಿ ಮಳೆ ಸುರಿಯಲಾರಂಭಿಸಿದ್ದು ಗೋಚರತೆ ಅತ್ಯಂತ ನಿಕೃಷ್ಟ ಮಟ್ಟಕ್ಕೆ ಇಳಿಯಿತು.

ಪರಿಣಾಮವಾಗಿ ಅನೇಕ ಹಾರಾಟಗಳನ್ನು ರದ್ದು ಪಡಿಸಲಾಯಿತು. ಮಾತ್ರವಲ್ಲದೆ ಆಗಮಿಸುವ ಮತ್ತುನಿರ್ಗಮಿಸುವ ವಿಮಾನಗಳ ಹಾರಾಟ ತೀವ್ರವಾಗಿ ವಿಳಂಬಗೊಂಡವು.

ಬೆಳಗ್ಗೆ 9.30ರಿಂದ ವಿಮಾನ ನಿಲ್ದಾಣದಲ್ಲಿನ ಗೋಚರತೆಯಲ್ಲಿ ತೀವ್ರ ಏರು ಪೇರು ಉಂಟಾಗಿದ್ದು ವಿಮಾನಗಳ ಆಗಮನ, ನಿರ್ಗಮನ ವಿಳಂಬವಾಗಲು ಇದು ಕಾರಣವಾಯಿತು. ಇಂದು ಬೆಳಗ್ಗಿನ ಅವಧಿಯಲ್ಲಿ ಇಲ್ಲಿಗೆ ಬರಲಿದ್ದ ವಿಮಾನಗಳ ಮಾರ್ಗವನ್ನು ಬದಲಾಯಿಸಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬಯಿ ಮಹಾನಗರಿಯಲ್ಲಿ ಕಳೆದ ಕೆಲವು ದಿನಗಳಿಂದ ಜಡಿ ಮಳೆಯಾಗುತ್ತಿದೆ. ಈ ವಾರ ಮಳೆ ಇನ್ನೂ ಹೆಚ್ಚಾಗಲಿದೆ ಎಂಬ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

Advertisement

ಆ ಪ್ರಕಾರ ಇಂದು ಸೋಮವಾರದ ನಸುಕಿನಿಂದಲೇ ಜಡಿ ಮಳೆ ಆರಂಭವಾಗಿದೆ. ಮಹಾನಗರಿಯ ಅನೇಕ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ತುಂಬಿಕೊಂಡಿದ್ದು ಲೋಕಲ್‌ ಟ್ರೈನ್‌ಗಳ ಸಂಚಾರ ಕೂಡ ಬಾಧಿತವಾಗಿದೆ ಎಂದು ವರದಿಗಳು ತಿಳಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next