Advertisement

ಚಲಿಸುತ್ತಿದ್ದ ಬಸ್ಸಿನಿಂದ ಜಿಗಿದು ಸರಗಳ್ಳನನ್ನು ಬೆನ್ನಟ್ಟಿ ಹಿಡಿದ ಯುವತಿ

10:41 PM Nov 02, 2020 | mahesh |

ಮುಂಬೈ: 19 ವರ್ಷದ ದಿಟ್ಟೆಯೊಬ್ಬಳು ಚಲಿಸುತ್ತಿದ್ದ ಬೆಸ್ಟ್‌ ಬಸ್ಸಿನಿಂದ ಜಿಗಿದು, ಪೊಲೀಸರ ಸಹಾಯದಿಂದ ಸರಗಳ್ಳನನ್ನು ಹಿಡಿದುಕೊಟ್ಟ ರೋಮಾಂಚಕ ಘಟನೆ ಚಾಕಲಾ ಸಮೀಪ ನಡೆದಿದೆ.

Advertisement

ಟೆಲಿಕಾರ್‌ ವೃತ್ತಿಯ ಸಂಜನಾ ಬಾಗುಲ್‌ ಈ ಸಾಹಸ ಮೆರೆದಿದ್ದಾಳೆ. ಬೆಳಗ್ಗೆ 10ರ ಸುಮಾರಿಗೆ ಅಂಧೇರಿ- ಕುರ್ಲಾ ಮಾರ್ಗವಾಗಿ ಬೆಸ್ಟ್‌ ಬಸ್ಸಿನಲ್ಲಿ ಕಚೇರಿಗೆ ತೆರಳುತ್ತಿದ್ದಳು. ಜನಜಂಗುಳಿಯಿಂದ ತುಂಬಿದ್ದ ಬಸ್ಸಿನಲ್ಲಿ 40 ಸಾವಿರ ರೂ. ಮೌಲ್ಯದ ಈಕೆಯ ಸರವನ್ನು ಕಳ್ಳನೊಬ್ಬ ಕದ್ದಿದ್ದಾನೆ. ಏನೋ ಆಗಿದೆ ಎಂದು ಸಂಶಯಗೊಂಡ ಸಂಜನಾಗೆ ಕೊರಳನ್ನು ಮುಟ್ಟಿ ನೋಡಿಕೊಂಡಾಗ ಸರ ಕಾಣೆಯಾಗಿರುವ ಸಂಗತಿ ಮನದಟ್ಟಾಗಿದೆ. ಕೂಡಲೇ ಬ್ಯಾಗಿನಲ್ಲೆಲ್ಲ ಹುಡುಕಿದ್ದಾಳೆ. ಇದೇ ವೇಳೆ ತನ್ನ ಪಕ್ಕ ನಿಂತಿದ್ದ ಅನುಮಾನಾಸ್ಪದ ವ್ಯಕ್ತಿ, ಬಸ್ಸಿನಿಂದ ಇಳಿದು ಓಡುತ್ತಿರುವುದನ್ನು ಗಮನಿಸಿದ್ದಾಳೆ. ಬಸ್ಸು ಚಾಕಲಾ ತಿರುವು ಬಳಿ ನಿಧಾನಕ್ಕೆ ಚಲಿಸುತ್ತಿದ್ದಾಗ ಸಂಜನಾ ಜಿಗಿದು, ಕಳ್ಳನನ್ನು ಬೆನ್ನಟ್ಟಿದ್ದಾಳೆ.

ಈ ವೇಳೆ ಚಾಕಲಾ ಸಿಗ್ನಲ್‌ನಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್‌ ಪೊಲೀಸ್‌, ಕಳ್ಳನನ್ನು ಹಿಡಿಯುವಲ್ಲಿ ಸಫ‌ಲರಾಗಿದ್ದಾರೆ. ಸರಗಳ್ಳ ಮುಕೇಶ್‌ ಗಾಯಕ್‌ವಾಡ್‌ನ‌ನ್ನು (34) ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next