Advertisement

ಪಟ್ಟಾಭಿಷೇಕಕ್ಕೆ ಮುನ್ನ ಕಿಂಗ್ ಚಾರ್ಲ್ಸ್ ಗೆ ಮುಂಬೈ ಡಬ್ಬಾವಾಲಾಗಳ ವಿಶೇಷ ಗಿಫ್ಟ್

02:54 PM May 04, 2023 | Team Udayavani |

ಮುಂಬೈ: ಪಟ್ಟಾಭಿಷೇಕಕ್ಕೆ ಮುನ್ನ ಯುಕೆ ಕಿಂಗ್ ಚಾರ್ಲ್ಸ್ III ಅವರಿಗೆ ಡಬ್ಬಾವಾಲಾಗಳು ಸಾಂಪ್ರದಾಯಿಕವಾದ ‘ಪುನೇರಿ ಪಗಡಿ’ಯನ್ನು ಉಡುಗೊರೆಯಾಗಿ ಕಳುಹಿಸಿದ್ದಾರೆ.

Advertisement

‘ಪುನೇರಿ ಪಗಡಿ’ 19 ನೇ ಶತಮಾನದಲ್ಲಿ ಪರಿಚಯಿಸಲಾದ ಸಾಂಪ್ರದಾಯಿಕ ಶಿರಸ್ತ್ರಾಣವಾಗಿದೆ ಮತ್ತು ಇದನ್ನು ಮಹಾರಾಷ್ಟ್ರದ ಪುಣೆ ನಗರದಲ್ಲಿ ಹೆಮ್ಮೆ ಮತ್ತು ಗೌರವದ ಸಂಕೇತವೆಂದು ಪರಿಗಣಿಸಲಾಗಿದೆ. ‘ಉಪರ್ಣೆ’ ಸಾಂಪ್ರದಾಯಿಕ ಸಮಾರಂಭಗಳಲ್ಲಿ ಪುರುಷರು ಭುಜದ ಮೇಲೆ ಧರಿಸುವ ಬಟ್ಟೆಯ ತುಂಡು ಇದಾಗಿದೆ.

ಡಬ್ಬಾವಾಲಾಗಳು ಜಾಗತಿಕವಾಗಿ ಪ್ರಸಿದ್ಧವಾದ ಲಂಚ್‌ಬಾಕ್ಸ್ ಡೆಲಿವರಿ ಮತ್ತು ರಿಟರ್ನ್ ವ್ಯವಸ್ಥೆಯನ್ನು ನಿರ್ವಹಿಸುತ್ತಾರೆ, ಇದು ಕೆಲಸದಲ್ಲಿರುವ ಜನರಿಗೆ ಮನೆಗಳು ಮತ್ತು ರೆಸ್ಟೋರೆಂಟ್‌ಗಳಿಂದ ಬಿಸಿ ಊಟವನ್ನು ಪೂರೈಸುತ್ತದೆ.

ಮುಂಬೈ ಡಬ್ಬಾವಾಲಾ ಸಂಘಟನೆಯ ಅಧ್ಯಕ್ಷ ರಾಮದಾಸ್ ಕರ್ವಾಂಡೆ ಪಿಟಿಐಗೆ ಈ ಬಾರಿ 74 ವರ್ಷದ ಬ್ರಿಟಿಷ್ ದೊರೆ ಪಟ್ಟಾಭಿಷೇಕ ಸಮಾರಂಭಕ್ಕೆ ಆಹ್ವಾನ ಬಂದಿಲ್ಲ ಎಂದು ಹೇಳಿದ್ದಾರೆ. ಈ ವಾರದ ಆರಂಭದಲ್ಲಿ, ತಮ್ಮ ಕೆಲವು ಪದಾಧಿಕಾರಿಗಳನ್ನು ಇಲ್ಲಿನ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನ್‌ನಿಂದ ತಾಜ್ ಹೋಟೆಲ್‌ನಲ್ಲಿ ಕಾರ್ಯಕ್ರಮಕ್ಕಾಗಿ ಆಹ್ವಾನಿಸಲಾಗಿತ್ತು, ಅಲ್ಲಿ ಅವರು ‘ಪುನೇರಿ ಪಗಡಿ’ ಮತ್ತು ‘ಉಪರ್ಣೆ’ ಯನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದರು, ಅವರು ಉಡುಗೊರೆಗಳನ್ನು ಕಿಂಗ್ ಚಾರ್ಲ್ಸ್‌ಗೆ ತಲುಪಿಸಲಾಗುತ್ತದೆ ಎಂದು ಖಚಿತಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಅವರ ತಾಯಿ ನಿಧನ ಹೊಂದಿದ ಬಳಿಕ ರಾಜನಾದ ಚಾರ್ಲ್ಸ್, ಬಕಿಂಗ್‌ಹ್ಯಾಮ್ ಅರಮನೆಯಿಂದ1,000-ವರ್ಷ ಹಳೆಯ ಅಬ್ಬೆಯಲ್ಲಿ ಕ್ಯಾಮಿಲ್ಲಾ ಜತೆಗೆ ಔಪಚಾರಿಕವಾಗಿ ಕಿರೀಟವನ್ನು ಧರಿಸಲಿದ್ದಾರೆ. ಪಟ್ಟಾಭಿಷೇಕಕ್ಕೆ ವಿಶ್ವದಾದ್ಯಂತದ ರಾಜವಂಶಸ್ಥರು ಮತ್ತು ಗಣ್ಯರನ್ನು ಆಹ್ವಾನಿಸಲಾಗಿದೆ.

Advertisement

2005 ರಲ್ಲಿ ಲಂಡನ್‌ನಲ್ಲಿ ನಡೆದ ಅಂದಿನ ಪ್ರಿನ್ಸ್ ಚಾರ್ಲ್ಸ್ ಮತ್ತು ಕ್ಯಾಮಿಲ್ಲಾ ಪಾರ್ಕರ್ ಬೌಲ್ಸ್ ಅವರ ರಾಯಲ್ ವೆಡ್ಡಿಂಗ್‌ನಲ್ಲಿ ಡಬ್ಬಾವಾಲಾ ಸಂಘದ ಇಬ್ಬರು ಸದಸ್ಯರನ್ನು ಆಹ್ವಾನಿಸಲಾಗಿತ್ತು. ಡಬ್ಬಾವಾಲಾಗಳು ಅವರಿಗೆ ಮಹಾರಾಷ್ಟ್ರದ ಪೇಟ ಮತ್ತು ಒಂಬತ್ತು ಗಜದ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದರು ಎಂದು ಎಂದು ರಾಮದಾಸ್ ಕರ್ವಾಂಡೆ ಅವರು ನೆನಪಿಸಿಕೊಂಡರು.

ಮುಂಬೈನ ಬಿರು ಬೇಸಿಗೆ ಇಲ್ಲ ಭಾರೀ ಮಳೆಯನ್ನೂ ಲೆಕ್ಕಿಸದೆ ಡಬ್ಬಾವಾಲಾಗಳು ತಮ್ಮ ಸಕಾಲಿಕ ವಿತರಣೆಯ ಧ್ಯೇಯವಾಕ್ಯದಲ್ಲಿ ಕೆಲಸ ಮಾಡಲು ಹೆಮ್ಮೆಪಡುತ್ತಾರೆ. 1998 ರಲ್ಲಿ ಫೋರ್ಬ್ಸ್ ನಿಯತಕಾಲಿಕವು ಅವರ ಕುರಿತು ವಿಶ್ಲೇಷಣೆಯನ್ನು ನಡೆಸಿತು ಮತ್ತು ಡಬ್ಬಾವಾಲಾಗಳ 100 ವರ್ಷಗಳ ಹಳೆಯ ವ್ಯವಹಾರಕ್ಕೆ ದಕ್ಷತೆಯ ‘ಸಿಕ್ಸ್ ಸಿಗ್ಮಾ’ ರೇಟಿಂಗ್ ಅನ್ನು ನೀಡಿತ್ತು ಎನ್ನುವುದು ಸೇವೆಗೆ ಸಂದ ದೊಡ್ಡ ಗೌರವವಾಗಿದೆ.

ಪ್ರಸ್ತುತ ಮುಂಬೈ ಮಹಾನಗರದಲ್ಲಿ 1,500 ಕ್ಕೂ ಹೆಚ್ಚು ಡಬ್ಬಾವಾಲಾಗಳು ಟಿಫಿನ್ ಡೆಲಿವರಿ ಕೆಲಸ ಮಾಡುತ್ತಿದ್ದಾರೆ. ಅವರು ಕೆಲಸದ ದಿನಗಳಲ್ಲಿ ಕಚೇರಿಗೆ ಹೋಗುವವರಿಗೆ ಸುಮಾರು ಎರಡು ಲಕ್ಷ ಟಿಫಿನ್‌ಗಳನ್ನು ತಲುಪಿಸುತ್ತಿದ್ದಾರೆ. ಹೆಚ್ಚಿನ ಡಬ್ಬಾವಾಲಾಗಳು ಊಟದ ಬಾಕ್ಸ್‌ಗಳು ತಮ್ಮ ಗಮ್ಯಸ್ಥಾನವನ್ನು ಸಮಯಕ್ಕೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಉಪನಗರ ರೈಲುಗಳನ್ನು ಬಳಸುತ್ತಾರೆ.ಬಹುತೇಕ ಡಬ್ಬಾವಾಲಾಗಳು ಪಶ್ಚಿಮ ಮಹಾರಾಷ್ಟ್ರದ ಮಾವಲ್ ಪ್ರದೇಶದವರಾಗಿದ್ದಾರೆ ಎನ್ನುವುದು ವಿಶೇಷ

ಕೋವಿಡ್ -19 ಲಾಕ್‌ಡೌನ್ ನಂತರ, ಅವರಲ್ಲಿ ಹಲವರು ಪುಣೆ ಜಿಲ್ಲೆಯ ತಮ್ಮ ಸ್ಥಳೀಯ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದರು ಎನ್ನುವುದು ನೋವಿನ ವಿಚಾರವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next