Advertisement

ಕ್ರಿಮಿನಲ್‌ ಆರೋಪಿಯನ್ನು ಇರಿದು ಕೊಂದ ನಾಲ್ವರು ಅಪರಿಚಿತ ದುಷ್ಕರ್ಮಿಗಳು

09:15 AM May 21, 2019 | Team Udayavani |

ಮುಂಬಯಿ : ಮುಂಬಯಿ ಹೊರವಲಯದ ಘಾಟ್‌ ಕೋಪರ್‌ನಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು 40ರ ಹರೆಯದ ವ್ಯಕ್ತಿಯೋರ್ವರನ್ನು ಇರಿದು ಕೊಂದರೆಂದು ಪೊಲೀಸರು ತಿಳಿಸಿದ್ದಾರೆ.

Advertisement

ಘಾಟ್‌ ಕೋಪರ್‌ ನಲ್ಲಿನ ಜಾಗೃತಿ ನಗರ ಮೆಟ್ರೋ ರೈಲು ನಿಲ್ದಾಣಕ್ಕೆ ಸಮೀಪ ಬೆಳಗ್ಗೆ 11.30ರ ಹೊತ್ತಿಗೆ ಈ ಘಟನೆ ನಡೆದಿದೆ.

ಬಬ್ಲೂ ದುಬೆ ಅಲಿಯಾಸ್‌ ಛೋಟಿ ಯನ್ನು ಅಪರಿಚಿತ ದುಷ್ಕರ್ಮಿಗಳು ಚೂರಿಯಿಂದ ಇರಿದರು. ತೀವ್ರವಾಗಿ ಗಾಯಗೊಂಡ ಬಬ್ಲೂ ವನ್ನು ಒಡನೆಯೇ ಸಮೀಪದ ಸರಕಾರಿ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ ಅಲ್ಲಿನ ವೈದ್ಯರು, ಬಬ್ಲೂ ಅದಾಗಲೇ ಮೃತಪಟ್ಟಿರುವುದಾಗಿ ಹೇಳಿದರು.

ಬಬ್ಲೂ  ವಿರುದ್ಧ ಕೊಲೆ ಯತ್ನ ಸಹಿತ ಕನಿಷ್ಠ ನಾಲ್ಕು ಕ್ರಿಮಿನಲ್‌ ಕೇಸುಗಳಿವೆ.

ಬಬ್ಲೂ ಕೊಲೆ ಸಂಬಂಧ ಘಾಟ್‌ ಕೋಪರ್‌ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದ್ದು ವೈಯಕ್ತಿಕ ದ್ವೇಷದ ಕಾರಣಕ್ಕೆ ಈತನ ಕೊಲೆ ನಡೆದಿದೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next