Advertisement

Mulki: ರಿಕ್ಷಾದಲ್ಲಿ ಗೋಮಾಂಸ ಸಾಗಾಟ: ಇಬ್ಬರ ಬಂಧನ

07:18 PM Sep 15, 2024 | Team Udayavani |

ಮೂಲ್ಕಿ: ಉಡುಪಿ ಜಿಲ್ಲೆಯ ಪಡಬಿದ್ರಿಯಿಂದ ನಾಲ್ಕು ದನಗಳನ್ನು ಕೊಂದು ಅಕ್ರಮವಾಗಿ ರಿಕ್ಷಾವೊಂದರಲ್ಲಿ ಸುರತ್ಕಲ್‌ನ ಕಾಟಿಪಳ್ಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ ಮಾಂಸವನ್ನು ಹಳೆಯಂಗಡಿಯ ಬಳಿ ಮೂಲ್ಕಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

ಸಾರ್ವಜನಿಕರಿಂದ ಬಂದ ಮಾಹಿತಿಯಂತೆ ಮೂಲ್ಕಿ ಎಸ್‌.ಐ. ಅನಿತಾ ಅವರು ಕಾರ್ಯಾಚರಣೆ ನಡೆಸಿದ್ದಾರೆ. ಹಳೆಯಂಗಡಿಯಲ್ಲಿ ರಿಕ್ಷಾವನ್ನು ತಪಾಸಣೆಗೊಳಪಡಿಸಿ ಮಾಂಸವನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿಗಳಾದ ಇಸ್ಮಾಯಿಲ್‌ ಹಾಗೂ ನಝೀರ್‌ ಎನ್ನುವವರನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next