Advertisement

ಬಿಜೆಪಿ ವಿರುದ್ಧ ಮುಲಾಯಂ ವಾಗ್ಧಾಳಿ; ಹೊಸ ಪಕ್ಷ ಆರಂಭಿಸಲ್ಲ

11:58 AM Sep 25, 2017 | Team Udayavani |

ಹೊಸದಿಲ್ಲಿ : ಉತ್ತರ ಪ್ರದೇಶದಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ತೀವ್ರ ವಾಕ್‌ ದಾಳಿ ನಡೆಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಅವರು, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರದಡಿ ಕಳೆದ ಮೂರು ವರ್ಷಗಳಲ್ಲಿ ಕೋಮು ಹಿಂಸೆ ಹೆಚ್ಚಳವಾಗಿದೆ ಎಂದು ಗುಡುಗಿದ್ದಾರೆ.

Advertisement

ಹೊಸ ಪಕ್ಷವನ್ನು ಆರಂಭಿಸುವ ಯಾವುದೇ ಆಲೋಚನೆ ತನಗಿಲ್ಲ ಎಂದು ಮುಲಾಯಂ ಸ್ಪಷ್ಟಪಡಿಸಿದರು.

“ಬನಾರಸ್‌ ಹಿಂದು ವಿಶ್ವವಿದ್ಯಾಲಯದಲ್ಲಿ  ಹುಡುಗಿಯರ ಸುರಕ್ಷಿತರಾಗಿಲ್ಲ. ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟು ಅರಾಜಕತೆ ತಾಂಡವವಾಡುತ್ತಿದೆ’ ಎಂದು ಉತ್ತರ ಪ್ರದೇಶದ ಮೂರು ಬಾರಿಯ ಸಿಎಂ, ಮುಲಾಯಂ ಸಿಂಗ್‌ ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next