Advertisement

TMC ತ್ಯಜಿಸುವುದಾಗಿ ಹೇಳಿದ ಮುಕುಲ್‌ ರಾಯ್‌ ಪಕ್ಷದಿಂದ ವಜಾ

03:25 PM Sep 25, 2017 | Team Udayavani |

ಹೊಸದಿಲ್ಲಿ : ತೃಣಮೂಲ ಕಾಂಗ್ರೆಸ್‌ ಪಕ್ಷ ಇಂದು ಸೋಮವಾರ ತನ್ನ ಪಕ್ಷದ ಹಿರಿಯ ನಾಯಕ ಮುಕುಲ್‌ ರಾಯ್‌ ಅವರನ್ನು ಅಮಾನತು ಮಾಡಿದೆ. ಇದಕ್ಕೆ ಮುನ್ನ ಮುಕುಲ್‌ ರಾಯ್‌ ಅವರು ತಾನನು ಪಕ್ಷವನ್ನು ತ್ಯಜಿಸುವುದಾಗಿ ಘೋಷಿಸಿದ್ದರು.

Advertisement

ಮುಕುಲ್‌ ರಾಯ್‌ ಅವರು ಪಕ್ಷದ ಓರ್ವ ಸ್ಥಾಪಕ ಸದಸ್ಯರು. ಪಶ್ಚಿಮ ಬಂಗಾಲದಲ್ಲಿ  ಎದುರಾಳಿ ಪಕ್ಷದೊಂದಿಗೆ ನಂಟು ಹೊಂದಿರುವ ಕಾರಣಕ್ಕೆ ರಾಯ್‌ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಟಿಎಂಸಿ ಹೇಳಿದೆ. 

ತನ್ನ ಪಕ್ಷದ ಯಾರೇ ಆದರೂ ವಿರೋಧ ಪಕ್ಷಗಳೊಂದಿಗೆ ಸಂಬಂಧ ಹೊಂದಿರುವುದನ್ನು ಪಕ್ಷವು ಎಂದೂ ಸಹಿಸುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್‌ ಹೇಳಿದೆ.

ದುರ್ಗಾ ಪೂಜೆಯ ಬಳಿಕ ತಾನು ಟಿಎಂಸಿಯನ್ನು ತ್ಯಜಿಸುವುದಾಗಿಯೂ ತನ್ನ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿಯೂ ಮುಕುಲ್‌ ರಾಯ್‌ ಹೇಳಿದ್ದರು. ಅದಾಗಿ ಕೆಲವೇ ತಾಸುಗಳಲ್ಲಿ ಟಿಎಂಸಿ ರಾಯ್‌ ಅವರನ್ನು ಪಕ್ಷದಿಂದ ವಜಾ ಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next