Advertisement

ಗುಜರಾತ್‍ನ ಸೋಮನಾಥ ದೇವಸ್ಥಾನಕ್ಕೆ 1.51 ಕೋ. ರೂ ದೇಣಿಗೆ ನೀಡಿದ ಮುಕೇಶ್ ಅಂಬಾನಿ

05:05 PM Feb 19, 2023 | Team Udayavani |

ಗುಜರಾತ್: ಮಹಾಶಿವರಾತ್ರಿಯ ಸಂದರ್ಭದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಹಾಗೂ ಅವರ ಮಗ, ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಅವರು ಗುಜರಾತ್​ನಲ್ಲಿರುವ ಸೋಮನಾಥ ದೇವಾಯಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Advertisement

ಅವರನ್ನು ದೇವಸ್ಥಾನ ಟ್ರಸ್ಟ್​ನ ಅಧ್ಯಕ್ಷ ಪಿ.ಕೆ. ಲಾಹಿರಿ ಹಾಗೂ ಕಾರ್ಯದರ್ಶಿ ಯೋಗೇಂದ್ರಭಾಯಿ ದೇಸಾಯಿ ಸ್ವಾಗತಿಸಿದ್ದಾರೆ.

ಈ ವೇಳೆ ಮುಖೇಶ್ ಅಂಬಾನಿ ಹಾಗೂ ಆಕಾಶ್ ಅಂಬಾನಿ ಶಿವಲಿಂಗಕ್ಕೆ ಅಭಿಷೇಕ ಮಾಡಿ ಪ್ರಾರ್ಥಿಸಿದರು. ಈ ಸಂದರ್ಭ ಸೋಮನಾಥ ದೇವಾಲಯದ ಟ್ರಸ್ಟ್‌ಗೆ 1.51 ಕೋ. ರೂ ದೇಣಿಗೆ ನೀಡಿದ್ದಾರೆ.


ಅಂಬಾನಿ ಕುಟುಂಬ ಅಪಾರವಾದ ದೈವಭಕ್ತಿಯನ್ನು ಹೊಂದಿದ್ದು. ಭಾರತೀಯ ಸಂಪ್ರದಾಯಗಳಿಗೆ ವಿಶೇಷ ಮನ್ನಣೆ ನೀಡುವ ಕುಟುಂಬ ಹಿಂದೂ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮುಕೇಶ್ ಅಂಬಾನಿ ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಭೇಟಿ ನೀಡಿ 1.5 ಕೋ. ರೂ. ದೇಣಿಗೆ ಸಲ್ಲಿಸಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next