Advertisement

ಕುರುಕ್ಷೇತ್ರಕ್ಕೆ ಮುಹೂರ್ತ ಫಿಕ್ಸ್‌

10:41 AM Jul 24, 2017 | |

“ಕುರುಕ್ಷೇತ್ರ’ ಚಿತ್ರದ ಸುದ್ದಿ ಜೋರಾಗಿ ಕೇಳಿಬರುತ್ತಲೇ ಇದೆ. ದಿನದಿಂದ ದಿನಕ್ಕೆ “ಕುರುಕ್ಷೇತ್ರ’ ತಂಡ ದೊಡ್ಡದಾಗುತ್ತಿದೆ. ನಟ, ನಟಿಯru ಸೇರ್ಪಡೆಯಾಗುತ್ತಲೇ ಇದ್ದಾರೆ. ಒಂದಷ್ಟು ಮಂದಿ ಕಲಾವಿದರ ಹೆಸರುಗಳು “ಕುರುಕ್ಷೇತ್ರ’ ತಂಡದ ಜೊತೆ ಕೇಳಿಬರುತ್ತಿದ್ದರೂ ಅವರು ಯಾವ ಪಾತ್ರ ಮಾಡುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಈಗ ಸ್ವತಃ ನಿರ್ದೇಶಕ ನಾಗಣ್ಣ ಯಾರ್ಯಾರು, ಯಾವ್ಯಾವ ಪಾತ್ರ ಮಾಡುತ್ತಿದ್ದಾರೆಂಬ ಬಗ್ಗೆ ಮಾತನಾಡಿದ್ದಾರೆ.

Advertisement

ಚಿತ್ರದಲ್ಲಿ ದರ್ಶನ್‌ ದುರ್ಯೋಧನ ಪಾತ್ರ ಮಾಡುತ್ತಿದ್ದು, ಈಗಾಗಲೇ ಅವರ ಟೆಸ್ಟ್‌ಶೂಟ್‌ ಆಗಿದೆ. ಹಿರಿಯ ನಟ ಶ್ರೀನಾಥ್‌ “ಕುರುಕ್ಷೇತ್ರ’ ಚಿತ್ರದಲ್ಲಿ ಧೃತರಾಷ್ಟ್ರ, ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರು ಶ್ರೀಕೃಷ್ಣ , ಹಿರಿಯ ನಟರಾದ ಅಂಬರೀಶ್‌ ಅವರು ಭೀಷ್ಮಾಚಾರ್ಯ, ಶ್ರೀನಿವಾಸ ಮೂರ್ತಿಗಳು ದ್ರೋಣಾಚಾರ್ಯ, ಅವಿನಾಶ್‌ ಅವರು ಗಾಂಧರ್ವ ರಾಜನಾಗಿ ನಟಿಸುತ್ತಿದ್ದಾರೆ. “ಕುರುಕ್ಷೇತ್ರ’ ಚಿತ್ರದಲ್ಲಿ ದ್ರೌಪದಿ ಪಾತ್ರವನ್ನು ಯಾರು ಮಾಡುತ್ತಾರೆಂಬ ಕುತೂಹಲವಿತ್ತು.

ಬಹುಭಾಷಾ ನಟಿ ಸ್ನೇಹಾ ದ್ರೌಪದಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿಖೀಲ್‌ ಕುಮಾರ್‌ ಅಭಿಮನ್ಯುವಾಗಿ ನಟಿಸಿದರೆ, ಚಿತ್ರದಲ್ಲಿ ಸಾಯಿಕುಮಾರ್‌ ಶಕುನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಹರಿಪ್ರಿಯಾ ಕೂಡಾ ನಟಿಸುತ್ತಿದ್ದು, ಅವರಿಲ್ಲೊಂದು ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟಿ ರೆಜಿನಾ ಕೂಡಾ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ. ಈ ಮಧ್ಯೆ ಕಲಾವಿದರ ಟೆಸ್ಟ್‌ ಶೂಟ್‌ ನಡೆಯುತ್ತಿದ್ದು, ಇಂದು ನಿಖೀಲ್‌ ಅವರ ಶೂಟ್‌ ನಡೆಯುವ ಸಾಧ್ಯತೆ ಇದೆ.

ಮುನಿರತ್ನ ನಿರ್ಮಾಣದ ಈ ಚಿತ್ರಕ್ಕೆ ಜುಲೈ 30ಕ್ಕೆ ಅದ್ಧೂರಿಯಾಗಿ ಮುಹೂರ್ತ ನಡೆಯಲಿದೆ. ಪೀಣ್ಯ ಬಳಿ ಇರುವ ಪ್ರಭಾಕರ್‌ ಕೋರೆ ಕನ್ವೆನ್‌ಷನ್‌ ಹಾಲ್‌ನಲ್ಲಿ ಚಿತ್ರದ ಮುಹೂರ್ತ ನಡೆಯಲಿದ್ದು, ಚಿತ್ರರಂಗದ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಚಿತ್ರಕ್ಕೆ ಹೆಸರಾಂತ ತಂತ್ರಜ್ಞರ ತಂಡವನ್ನು ಕಲೆ ಹಾಕಲಾಗಿದ್ದು, ಜಯನನ್‌ ವಿನ್ಸೆಂಟ್‌ ಛಾಯಾಗ್ರಹಣ, “ಬಾಹುಬಲಿ’ ಖ್ಯಾತಿಯ ಕಿಂಗ್‌ ಸಾಲೋಮನ್‌ ಸಾಹಸ, ಹರಿಕೃಷ್ಣ ಸಂಗೀತ, ಜೊ.ನಿ.ಹರ್ಷ ಸಂಕಲನ ಚಿತ್ರಕ್ಕಿದೆ. ಈಗಾಗಲೇ ಒಂದಷ್ಟು ಪಾತ್ರಗಳಿಗೆ ಕಲಾವಿದರ ಆಯ್ಕೆಯಾಗಿದ್ದು, ಇನ್ನಷ್ಟು ಮಂದಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಸದ್ಯ “ಕುರುಕ್ಷೇತ್ರ’ ಚಿತ್ರಕ್ಕೆ ಆಯ್ಕೆಯಾಗಿರುವ ಕಲಾವಿದರು ಯಾವ್ಯಾವ ಪಾತ್ರ ಮಾಡುತ್ತಿದ್ದಾರೆಂಬ ಮಾಹಿತಿ ಇಲ್ಲಿದೆ. 

Advertisement

ಟೀಂ ಕುರುಕ್ಷೇತ್ರ ಯಾರ್ಯಾರು, ಏನೇನು?
* ದರ್ಶನ್‌ – ದುರ್ಯೋಧನ
* ರವಿಚಂದ್ರನ್‌ – ಶ್ರೀಕೃಷ್ಣ
*ಅಂಬರೀಶ್‌ – ಭೀಷ್ಮಾಚಾರ್ಯ
* ನಿಖೀಲ್‌ ಕುಮಾರ್‌- ಅಭಿಮನ್ಯು
* ಶ್ರೀನಾಥ್‌ – ಧೃತರಾಷ್ಟ್ರ
* ಸಾಯಿಕುಮಾರ್‌ – ಶಕುನಿ
* ಶಶಿಕುಮಾರ್‌ – ಧರ್ಮರಾಯ
* ಶ್ರೀನಿವಾಸಮೂರ್ತಿ – ದ್ರೋಣಾಚಾರ್ಯ
* ಅವಿನಾಶ್‌ – ಗಾಂಧರ್ವ ರಾಜ
* ಸ್ನೇಹಾ – ದ್ರೌಪದಿ
* ಲಕ್ಷ್ಮೀ – ಕುಂತಿ

ತಂತ್ರಜ್ಞರ ತಂಡ
* ಛಾಯಾಗ್ರಹಣ:
ಜಯನನ್‌ ವಿನ್ಸೆಂಟ್‌
* ಸಾಹಸ: “ಬಾಹುಬಲಿ’ ಖ್ಯಾತಿಯ ಕಿಂಗ್‌ ಸಾಲೋಮನ್‌
* ಸಂಗೀತ: ಹರಿಕೃಷ್ಣ
* ಸಂಕಲನ: ಜೊ.ನಿ.ಹರ್ಷ

Advertisement

Udayavani is now on Telegram. Click here to join our channel and stay updated with the latest news.

Next