Advertisement

ಮುಗುಳಿ ತಾಳ್ತಜೆ: ನಾಡ ಬಾಂಬ್‌ ಎಸೆದು ಗೂಡಂಗಡಿ ಧ್ವಂಸ

11:08 AM Oct 16, 2018 | Team Udayavani |

ಕುಂಬಳೆ:  ಕೇರಳ – ಕರ್ನಾಟಕ ಗಡಿಪ್ರದೇಶವಾದ ಬಾಯಾರು ಮುಳಿಗದ್ದೆ ಬಳಿಯ ಮುಗುಳಿ ತಾಳ್ತಜೆಯಲ್ಲಿ ಸಂಘ ಪರಿವಾರದ ಕಾರ್ಯಕರ್ತ ಉಮೇಶ್‌  ಅವರ ಗೂಡಂಗಡಿಗೆ ಕಿಡಿಗೇಡಿಗಳು  ರವಿವಾರ ರಾತ್ರಿ ನಾಡ ಬಾಂಬ್‌ ಎಸೆದು ಹಾನಿ ಮಾಡಲಾಗಿದೆ. 

Advertisement

ಬಾಂಬ್‌ ಸಿಡಿದು ಅಂಗಡಿ ಧ್ವಂಸವಾಗಿದ್ದು, ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿವೆ. ಅಂಗಡಿ ಮಾಲಕ ಉಮೇಶ್‌ ಅವರು ಮುಳಿಗದ್ದೆಯಲ್ಲಿ  ರವಿವಾರ ನಡೆದ ಸಂಘಪರಿವಾರದ ಶಬರಿಮಲೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಇದರ ಸೇಡಿನಲ್ಲಿ ಯಾರೋ ಕಿಡಿಗೇಡಿಗಳು ಈ ಕೃತ್ಯ ನಡೆಸಿರುವುದಾಗಿ ಸಂಘ ಪರಿವಾರದ ನಾಯಕರು ಆರೋಪಿಸಿದ್ದಾರೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿರುವರು.

Advertisement

Udayavani is now on Telegram. Click here to join our channel and stay updated with the latest news.

Next