Advertisement

Crime: ಯುವಕನನ್ನು ಕಾರಿನಲ್ಲಿ ಕರೆದೊಯ್ದು ಕೊಲೆಗೆತ್ನ: 17 ರ ಬಾಲಕ ಸಹಿತ ಇಬ್ಬರ ಬಂಧನ

07:51 PM Apr 04, 2024 | Team Udayavani |

ಕುಂಬಳೆ: ಉಪ್ಪಳ ಬಪ್ಪಾಯಿತೊಟ್ಟಿ ಹನಫಿ ಮಸ್ಜಿದ್‌ ಸಮೀಪದ ಅಮಾನ್‌ ಮಂಜಿಲ್‌ನ ಮುಹಮ್ಮದ್‌ ಫಾರೂಕ್‌(35) ಅವರನ್ನು ಮನೆಯಿಂದ ಕರೆದೊಯ್ದು ಹಲ್ಲೆಗೈದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಬ್ರಾಣ ನಿವಾಸಿ ಕಿರಣ್‌ ರಾಜ್‌(24) ಹಾಗು 17 ರ ಹರೆಯದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಕಿರಣ್‌ರಾಜ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ. 17 ರ ಹರೆಯದ ಬಾಲಕನ ಕುರಿತು ಜುವೈನಲ್‌ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಘಟನೆಗೆ ಸಂಬಂಧಿಸಿ ನಾಲ್ವರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದು, ಇನ್ನಿಬ್ಬರ ಬಂಧನಕ್ಕೆ ಶೋಧ ನಡೆಯುತ್ತಿದೆ. ಗಾಯಾಳು ಫಾರೂಕ್‌ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next