Advertisement

ನಳನಳಿಸುತ್ತಿದೆ ಮುಗದ ರೈಲು ನಿಲ್ದಾಣ

05:29 PM Nov 18, 2018 | Team Udayavani |

ಹುಬ್ಬಳ್ಳಿ: ಸ್ವಚ್ಚತಾ ಅಭಿಯಾನದಿಂದಾಗಿ ನೈಋತ್ಯ ರೈಲ್ವೆ ವ್ಯಾಪ್ತಿಯ ಧಾರವಾಡ ಜಿಲ್ಲೆಯ ಮುಗದ ರೈಲು ನಿಲ್ದಾಣ ಸುಂದರವಾಗಿ ಕಂಗೊಳಿಸುತ್ತಿದೆ. ನಿಲ್ದಾಣವನ್ನು ಶುಚಿಗೊಳಿಸಿದ್ದಲ್ಲದೇ 10 ಕಿಮೀ ಟ್ರ್ಯಾಕ್‌ ಸ್ವಚ್ಚಗೊಳಿಸಲಾಗಿದೆ. ಅಲ್ಲದೇ ಬಿಳಿ ಹಾಗೂ ಕೆಂಪು ಬಣ್ಣ ಬಳಿಯಲಾಗಿದೆ. ನಿಲ್ದಾಣದಲ್ಲಿ ಲಿಲ್ಲಿ, ಗುಲಾಬಿ ಸೇರಿದಂತೆ ವಿವಿಧ ಹೂವಿನ ಸಸಿ ನೆಡಲಾಗಿದೆ.

Advertisement

ಹಿರಿಯ ಸೆಕ್ಷನ್‌ ಎಂಜಿನಿಯರ್‌ ಶಫಿ ಖಾಜಿ ನೇತೃತ್ವದಲ್ಲಿ ಈ ಕಾರ್ಯ ನಡೆದಿದೆ. ನಿಲ್ದಾಣ ಸೌಂದರ್ಯೀಕರಣ ಕಾಮಗಾರಿ ಮೆಚ್ಚಿ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್‌ ಅವರು ಎಂಜಿನಿಯರ್‌ ಶಫಿ ಖಾಜಿ ಅವರಿಗೆ 5000 ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಿದ್ದಾರೆ. ನೈಋತ್ಯ ರೈಲ್ವೆ ವ್ಯಾಪ್ತಿಯ ಇತರ ನಿಲ್ದಾಣಗಳಲ್ಲಿ ಇದೇ ರೀತಿಯ ಸ್ವಚ್ಚತಾ ಕಾರ್ಯ ನಡೆಸಬೇಕೆಂದು ಪ್ರಧಾನ ವ್ಯವಸ್ಥಾಪಕರು ಸಿಬ್ಬಂದಿಗೆ ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next