Advertisement

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

12:31 AM Apr 28, 2024 | Team Udayavani |

ಕಾಸರಗೋಡು: ಮಂಗಳೂರು ಸೆಂಟ್ರಲ್‌-ಚೆನ್ನೈ ಎಕ್ಸ್‌ಪ್ರೆಸ್‌ ರೈಲು ಗಾಡಿಗೆ ಕಲ್ಲೆಸೆತದಿಂದ ಮಂಗಳೂರು ಬೈಕಂಪಾಡಿಯ ಅಫ್ರಿನಾ(17) ಗಾಯಗೊಂಡಿದ್ದಾರೆ.

Advertisement

ಮಂಜೇಶ್ವರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ರೈಲು ಗಾಡಿಗೆ ಕಲ್ಲೆಸೆಯಲಾಗಿದೆ. ಕಾಸರಗೋಡು ರೈಲ್ವೇ ಪೊಲೀಸ್‌ ಎಸ್‌ಐ ಸನಲ್‌ ಕುಮಾರ್‌, ಮಂಗಳೂರು ಆರ್‌ಪಿಎಫ್‌ ಎಎಸ್‌ಐ ಪ್ರಮೋದ್‌ ಅಜಿತ್‌ ನೇತೃತ್ವದಲ್ಲಿ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದರು.

ಕಲ್ಲೆಸೆದವರ ಬಗ್ಗೆ ಮಾಹಿತಿ ಲಭಿಸಿಲ್ಲ. ಕುಟುಂಬ ಸಹಿತ ಮಲಪ್ಪುರಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಫ್ರಿನಾ ಗಾಯಗೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next