Advertisement

ಮುದ್ರಾಡಿ: ರಾಷ್ಟ್ರೀಯ ರಂಗೋತ್ಸವಕ್ಕೆ  ಚಾಲನೆ

05:47 PM Mar 06, 2017 | Team Udayavani |

ಹೆಬ್ರಿ: ನಮ ತುಳುವೆರ್‌ ಕಲಾ ಸಂಘಟನೆಯ ವತಿಯಿಂದ ನಡೆಯುವ 7ನೇ ವರ್ಷದ ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ-2017ಕ್ಕೆ  ಫೆ.25ರಂದು ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಮುದ್ರಾಡಿ ನಾಟ್ಕದೂರು ನಮತುಳುವೆರ್‌ ಕಲಾಸಂಘಟನೆಯ ವತಿಯಿಂದ ಸುಕುಮಾರ್‌ ಮೋಹನ್‌ ನೇತೃತ್ವದಲ್ಲಿ ಸುಮಾರು 63ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಉಡುಪಿ ಜಿಲ್ಲೆಯ ಪ್ರಥಮ ಬಯಲು ರಂಗಮಂದಿರ  ಚೌಟರ ಬಯಲನ್ನು ಉಡುಪಿ ಅದಾನಿ ಯುಪಿಸಿಎಲ್‌ ಜಂಟಿ ಅಧ್ಯಕ್ಷ ಕಿಶೋರ್‌ ಆಳ್ವ ಉದ್ಘಾಟಿಸಿದರು.

Advertisement

ಕಾರ್ಯಕ್ರಮದಲ್ಲಿ ರಂಗ ಕಲಾವಿದ ಮುಂಬಯಿ ಮೋಹನ್‌ ಅವರನ್ನು ಸಮ್ಮಾನಿಸಲಾಯಿತು.ಸಮಾರಂಭದಲ್ಲಿ  ಮಾಜಿ ಶಾಸಕ ಎಚ್‌ ಗೋಪಾಲ ಭಂಡಾರಿ,ನಾಟ್ಕ ಮುದ್ರಾಡಿ ಸಂಸ್ಥಾಪಕ ಧರ್ಮಯೋಗಿ ಮೋಹನ್‌,ಮಾಜಿ ಜಿ.ಪಂ.ಸದಸ್ಯ ಮಂಜುನಾಥ ಪೂಜಾರಿ, ನಮ ತುಳುವೆರ್‌ ಕಲಾ ಸಂಘಟನೆಯ  ಅಧ್ಯಕ್ಷ ಸುಕುಮಾರ್‌ ಮೋಹನ್‌,ರಂಗ ನಿರ್ದೇಶಕ ಡಾ| ಶ್ರೀಪಾದ ಭಟ್‌, ಕೃಷ್ಣಮೂರ್ತಿ ಕವತ್ತಾರ್‌,ನೀರೆ ಕೃಷ್ಣ ಶೆಟ್ಟಿ,ಸಂತೋಷ ಕುಮಾರ್‌ ಶೆಟ್ಟಿ,ವಾಣಿ ಸುಕುಮಾರ್‌ ಮೋಹನ್‌, ಸುಧೀಂದ್ರ ಮೋಹನ್‌,  ಸುಗಂಧಿ ಉಮೇಶ್‌ ಕಲ್ಮಾಡಿ, ಸುರೇಂದ್ರ ಮೋಹನ್‌ ಮೊದಲಾದವರು ಉಪಸ್ಥಿತರಿದ್ದರು. ರಂಗನಿರ್ದೇಶಕ ಜಗದೀಶ್‌ ಜಾಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ ರಂಗಾಯಣ ಧಾರವಾಡದ ಗಣೇಶ್‌ ಚಂದನಶಿವೆ ನಿರ್ದೇಶನದ ಕನ್ನಡ ನಾಟಕ “ತಮಾಶಾ’ ಪ್ರದರ್ಶನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next