Advertisement

ಮೂಡಿಗೆರೆ: ಕಣ್ಣು ದೃಷ್ಟಿ ತೆಗೆಯುವ ಕೆಸವಳಲು ಕೂಡಿಗೆ

01:37 PM Feb 19, 2023 | Team Udayavani |

ಮೂಡಿಗೆರೆ: ತಾಲೂಕಿನ ಜೊಗಣಕೆರೆ ಗ್ರಾಮದ ಕೆಸವಳಲು ಕೂಡಿಗೆಗೆ ದಕ್ಷಿಣ ಕರ್ನಾಟಕದ ಹೆಚ್ಚಿನ ಜನ ಬರುತ್ತಾರೆ. ಇದು ಕೆಸವಳಲು ಮತ್ತು ಅಬಚೂರು- ಹಾಲೂರು ಮದ್ಯ ಭಾಗದಲ್ಲಿ ಸೇರುವ ಹೇಮಾವತಿ ಮತ್ತು ಜಪವಾತಿ ನದಿ ಸೇರುವ ಸ್ಥಳಕ್ಕೆ ಕೂಡಿಗೆ ಅನ್ನುತ್ತಾರೆ.

Advertisement

ಇಲ್ಲಿ ರಾಮ ದೇವಸ್ಥಾನವಿದೆ. ನದಿಗಳು ಸೇರುವ ಜಾಗದಲ್ಲಿ ಆಸ್ರಕೊಂಡ ಇದೆ. ಅದೆ ರೀತಿ ಅನಾದಿ ಕಾಲದಿಂದಲೂ ಕಣ್ಣುದೃಷ್ಟಿ ತೆಗೆಯುವ ವಿಧಿವಿಧಾನವಿದೆ. ದೃಷ್ಟಿ ದೋಷ ಆಗುವುದು ನಿಜವಾದರೆ ತೆಗೆಯುವುದು ಕೂಡಾ ನಿಜ.

ವಿಶೇಷವಾಗಿ ನವ ವಿವಾಹಿತ ಜೋಡಿಗಳಿಗೆ ದೃಷ್ಟಿ ಆಗಿರುತ್ತದೆ ಎಂದು ದೃಷ್ಠಿ ತೆಗೆದುಕೊಳ್ಳತ್ತಾರೆ. ಇಲ್ಲಿ ಪ್ರತಿ ವರ್ಷದಲ್ಲಿ ವ್ಯಾಪಾರ ವಹಿವಾಟುದಾರರು ಒಂದೆರಡು ಬಾರಿ ಬರುತ್ತಾರೆ. ದೃಷ್ಟಿ ತೆಗೆಸಿಕೊಳ್ಳಲು ಮುಸ್ಲಿಂ, ಕ್ರೀಶ್ಚಿಯನ್ ಸೇರಿ ಎಲ್ಲಾ ಧರ್ಮದವರು ಲಕ್ಷಾಂತರ ಜನ ಬಂದು ಹೋಗುತ್ತಾರೆ.

ಹೊಸ ವಾಹನಗಳಿಗೆ ವಿಶೇಷವಾಗಿ ದೃಷ್ಟಿ ಪೊಜೆ, ನವ ಜೋಡಿಗಳಿಗೆ ಬಾಸಿಂಗ ಪೊಜೆ, ಮನೆಯ ಹಾಗೂ ತೋಟದ ಮಣ್ಣು ತಂದು ದೃಷ್ಟಿ ಪೊಜೆ ಮಾಡುತ್ತಾರೆ.

ಇಲ್ಲಿ ಗದ್ದೆ ಕೊಯ್ಯುವ ಮೂದಲು ಅಂದರೆ ಹಸಿರು ಫಲ ಕಟಾವು ಮಾಡುವ ಮೊದಲು ಪೊಜೆ ಮಾಡಿಸಿದರೆ ಉತ್ತಮ ಎಂಬ ವಾಡಿಕೆ ಇದೆ. ಇಲ್ಲಿನ ಅಭಿವೃದ್ಧಿ ವಿಚಾರದಲ್ಲಿ ಶೂನ್ಯ ಸಾಧನೆ. ಪೂಜೆಗೆ ಒಂದು ಬಾರಿಗೆ ಹತ್ತು ಕುಟುಂಬಗಳಿಗೆ ದೃಷ್ಠಿ ತೆಗೆಸಲು ಅವಕಾಶ ಇದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next