Advertisement

Mudholal: ಶಾಶ್ವತ ಸೂರು ಕಲ್ಪಿಸಿ; ಕಣ್ಣೀರು ಹಾಕಿ ಸಚಿವರಿಗೆ ಮನವಿ ಸಲ್ಲಿಸಿದ ಮಹಿಳೆಯರು

09:06 PM Jul 30, 2024 | Team Udayavani |

ಮುಧೋಳ: ಎರಡು ದಶಕದಿಂದ‌ ಶಾಶ್ವತವಾದ ಸೂರು ಇಲ್ಲದೇ ತೊಂದರೆ ಅನುಭವಿಸುತ್ತಿದ್ದು,  ಸರ್ಕಾರದಿಂದ ಯಾವುದೇ  ಪರಿಹಾರ‌‌ ಕಲ್ಪಿಸದಿರುವುದರಿಂದ  ನಮ್ಮ ಬದುಕು ಬೀದಿಗೆ ಬರುವಂತಾಗಿದೆ ನೀವಾದರು ನಮಗೆ ಶಾಶ್ವತ ಪರಿಹಾರ ಕಲ್ಪಿಸಿ‌ ಬೇರೆಡೆ ಮನೆ ನಿರ್ಮಿಸಿ  ಕೊಟ್ಟು ಪುಣ್ಯ ಕಟ್ಟಿಕೊಳ್ಳಿ‌‌ ಎಂದು ಪ್ರವಾಹದಿಂದ ಮನೆ ಕಳೆದುಕೊಂಡು‌‌ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಮಹಿಳೆಯರು ಕಂದಾಯ ಸಚಿವ ಕೃಷ್ಣಭೈರೇಗೌಡರ ಎದುರು ಕಣ್ಣೀರು ಹಾಕಿದ‌‌‌ ಪ್ರಸಂಗ ಜರುಗಿತು.

Advertisement

ಪ್ರವಾಹ ಪರಿಶೀಲನೆಗಾಗಿ ಮುಧೋಳ ನಗರದ ಕುಂಬಾರ ಓಣಿಯ ಕಾಳಜಿ ಕೇಂದ್ರಕ್ಕೆ‌ ಆಗಮಿಸಿದ ವೇಳೆ ಸಚಿವರ ಸುತ್ತುವರಿದ ಮಹಿಳೆಯರು, ಶಾಶ್ವತ ಪರಿಹಾರ ನೀಡಿ ಪ್ರವಾಹ ಪರಿಸ್ಥಿತಿಯಿಂದ ನಮಗೆ ಮುಕ್ತಿ‌ ನೀಡಿ ಎಂದು ಮನವಿ‌ ಮಾಡಿದರು.
ಈ ವೇಳೆ ಜಿಲ್ಲಾ ಉಸ್ತುವಾರಿ‌ ಸಚಿವ ಆರ್.ಬಿ. ತಿಮ್ಮಾಪುರ, ಉಮಾಶ್ರೀ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next