Advertisement

ಮುಧೋಳ: ಮಳೆಯಿಂದಾಗಿ ಕೊಚ್ಚಿ ಹೋದ ತಾತ್ಕಾಲಿಕ ಸೇತುವೆ

12:37 PM May 20, 2022 | Team Udayavani |

ಮುಧೋಳ : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತಾಲೂಕಿನ ಮಡಿಹಳ್ಳಕ್ಕೆ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದೆ.

Advertisement

ಮುಧೋಳ ವಜ್ಜರಮಟ್ಟಿ ನಡುವೆ ಪ್ರಮುಖ ರಸ್ತೆಯಲ್ಲಿರುವ ಮಡಿಹಳ್ಳ ಹೊಸ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಸವಾರರ ಅನುಕೂಲಕ್ಕಾಗಿ ತಾತ್ಕಾಲಿಕ ಪಕ್ಕದಲ್ಲಿಯೇ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿತ್ತು. ಆದರೆ ಧಾರಾಕಾರ ಮಳೆಯಿಂದಾಗಿ ಸೇತುವೆ ಕೊಚ್ಚಿ ಹೋಗಿದೆ. ಇದರಿಂದಾಗಿ ಆಲಗುಂಡಿ, ಮಾಚಕನೂರ, ಬರಗಿ, ವಜ್ಜರಮಟ್ಟಿ, ಮರಿಕಟ್ಟಿ ಸೇರಿದಂತೆ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ವಾಹನ ಸವಾರರು ಹಲಗಲಿ, ಮೆಳ್ಳಿಗೇರಿ ಹಾಗೂ ತಿಮ್ಮಾಪುರ ಮಾರ್ಗವನ್ನು ಬಳಸಿ ಮುಧೋಳಕ್ಕೆ ತೆರಳುವಂತಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next