Advertisement

27 ಕಾರ್ಮಿಕರ ಬಿಡುಗಡೆ

06:16 PM May 31, 2020 | Naveen |

ಮುದಗಲ್ಲ: ಹಲ್ಕಾವಟಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕ್ವಾರಂಟೈನ್‌ ಕೇಂದ್ರದಲ್ಲಿದ್ದ 21 ಜನರು 14 ದಿನಗಳು ಕ್ವಾರಂಟೈನ್‌ ಪೂರೈಸಿ ಮನೆಗೆ ತೆರಳಿದ್ದಾರೆ.

Advertisement

ಕೋವಿಡ್ ವರದಿ ನೆಗೆಟಿವ್‌ ವರದಿ ಬಂದಿರುವ ಕಾರಣ ತಹಶೀಲ್ದಾರ್‌ ಅನುಮತಿ ಮೇರೆಗೆ 21 ಕಾರ್ಮಿಕರಿಗೆ ಹೋಂ ಕ್ವಾರಂಟೈನ್‌ ಮುದ್ರೆ ಹಾಕಿ ಕ್ವಾರಂಟೈನ್‌ ಕೇಂದ್ರದಿಂದ ಬಿಡುಗಡೆ ಮಾಡಿದರು. ಬೇರೆ ರಾಜ್ಯಗಳಿಂದ ಬಂದಿದ್ದ ಹಿನ್ನೆಲೆ ಅವರನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಗ್ರಾಪಂ ಅಧ್ಯಕ್ಷ ಯಮನೂರಪ್ಪ, ಪಿಡಿಒ ನರಸಪ್ಪ, ಗ್ರಾಮ ಲೆಕ್ಕಾಧಿಕಾರಿ ಇಮಾಮಸಾಬ್‌, ಡಾ| ಸಚಿನ್‌ ಇದ್ದರು.

ಆರು ಜನ ಬಿಡುಗಡೆ: ತಲೇಖಾನ ಗ್ರಾಪಂ ನೂತನ ಕಟ್ಟಡದಲ್ಲಿ ಕ್ವಾರಂಟೈನ್‌ ಮಾಡಲಾದ ಲಿಂಬೆಪ್ಪನ ತಾಂಡಾದ 6 ಜನರು 14 ದಿನಗಳು ಕ್ವಾರಂಟೈನ್‌ ಪೂರೈಸಿ ಮನೆಗೆ ತೆರಳಿದರು. ಕೋವಿಡ್  ವರದಿ ನೆಗೆಟಿವ್‌ ವರದಿ ಬಂದಿರುವ ಕಾರಣ ತಹಶೀಲ್ದಾರ್‌ ಅನುಮತಿ ಮೇರೆಗೆ ತಾಂಡಾ ನಿವಾಸಿಗಳಿಗೆ ಹೋಂ ಕ್ವಾರಂಟೈನ್‌ ಮುದ್ರೆ ಹಾಕಿ ಕ್ವಾರಂಟೈನ್‌ ಕೇಂದ್ರದಿಂದ ಬಿಡುಗಡೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next