Advertisement

ಮುದಗಲ್ಲ: ಮತ್ತಿಬ್ಬರಿಗೆ ಮಹಾಮಾರಿ ಸೋಂಕು

02:31 PM Jul 14, 2020 | Suhan S |

ಮುದಗಲ್ಲ: ಪಟ್ಟಣದ ಬೇಗಂಪುರ ಪೇಟೆಯ ಮೌಲಾಲಿ ದರ್ಗಾ ಹತ್ತಿರದ ಒಬ್ಬ ಯುವಕ (20) ಹಾಗೂ ಸರ್ಕಾರಿ ಆಸ್ಪತ್ರೆ ಪ್ರಯೋಗ ಶಾಲೆ ಸಿಬ್ಬಂದಿ (33) ಸೇರಿ ಇಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಸೋಂಕಿತರನ್ನು ರಾಯಚೂರು ಕೋವಿಡ್‌ ಆಸ್ಪತ್ರೆಗೆ ದಾಖಲಿಸಿ ಐಸೋಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಬೇಗಂಪುರಪೇಟೆ ಸೋಂಕಿತ ಯುವಕನ ಪ್ರಾಥಮಿಕ 14 ಜನ ಸಂಪರ್ಕಿತರು, ದ್ವಿತೀಯ ಸಂಪರ್ಕಿತ 34 ಜನರನ್ನು ಹೋಂ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಯುವಕನ ಮನೆ ಸುತ್ತಲಿನ 100 ಮೀಟರ್‌ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಪುರಸಭೆ ಸಿಬ್ಬಂದಿ ಸೋಂಕಿತನ ಮನೆ ಸುತ್ತಮುತ್ತ ಸೋಂಕು ನಿವಾರಕ ದ್ರಾವಣ ಸಿಂಪಡಿಸಿದ್ದಾರೆ. ಇನ್ನು ಮುದಗಲ್ಲ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಗಂಟಲು ದ್ರವವನ್ನು ಲಿಂಗಸುಗೂರ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಲಾಗಿತ್ತು. ಜು.12ರಂದು ಸೋಂಕು ದೃಢಪಟ್ಟಿದೆ.

ತಾಲೂಕು ವೈದ್ಯರನ್ನು ಕೇಳಿ ಸರ್ಕಾರಿ ಆಸ್ಪತ್ರೆ ಸೀಲ್‌ಡೌನ್‌ ಮಾಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ನರಸಿಂಹಮೂರ್ತಿ ತಿಳಿಸಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ನರಸಿಂಹಮೂರ್ತಿ, ಸರ್ಕಾರಿ ಆಸ್ಪತ್ರೆಯ ಡಾ| ಅನಂತಕುಮಾರ, ಡಾ| ರಾಘವಾಂಕ ಶರ್ಮಾ, ಡಾ| ಶಂಕರಾಚಾರ್ಯ, ಪಿಎಸ್‌ಐ ಡಾಕೇಶ ಯು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next