Advertisement

Kannada Movie: ಮಗಳ ನಂಬಿದ ತಂದೆ

03:08 PM Jul 09, 2024 | Team Udayavani |

ಚಿತ್ರರಂಗದಲ್ಲಿ ಎರಡು ದಶಕಗಳ ಕಾಲ ಪ್ರೊಡಕ್ಷನ್‌ ಮ್ಯಾನೇಜರ್‌ ಆಗಿ ಸೇವೆ ಸಲ್ಲಿಸಿರುವ ಕೆ.ಎಸ್‌.ನಾಗರಾಜ್‌ ಈಗ “ಮುದ್ದಿನ ಮಗಳು’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಜತೆಗೆ ಅಮೂಲ್ಯ ಮೂವೀ ಮೇಕರ್ಸ್‌ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.

Advertisement

ಇತ್ತೀಚೆಗೆ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆ ಸರಳವಾಗಿ ನಡೆಯಿತು. ಸಿನಿಮಾವು ತಂದೆ ಮಗಳ ಬಾಂಧವ್ಯವನ್ನು ಸಾರಲಿದೆ. ಕಥೆಯಲ್ಲಿ ಮಗಳನ್ನು ಯಾವ ರೀತಿ ಸಾಕುತ್ತಾನೆ. ಆಕೆಗೋಸ್ಕರ ಎಲ್ಲವನ್ನು ತ್ಯಾಗ ಮಾಡುತ್ತಾನೆ. ಆದರೆ ವಯಸ್ಸಿಗೆ ಬಂದ ಮೇಲೆ ಅವಳು ಅಪ್ಪನನ್ನು ನೋಡುವ ಪರಿ ಬೇರೆಯದೆ ಆಗುತ್ತದೆ. ಇದರಿಂದ ಆತ ಖನ್ನತೆಗೆ ಹೋಗುತ್ತಾನೆ. ಕ್ಲೈಮ್ಯಾಕ್ಸ್‌ನಲ್ಲಿ ಏನಾಗುತ್ತದೆ ಎಂಬುದನ್ನು ಮನಮುಟ್ಟುವ ಸನ್ನಿವೇಶಗಳೊಂದಿಗೆ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆಯಂತೆ.

ನಿರ್ಮಾಪಕರ ಮೂವರು ಹೆಣ್ಣು ಮಕ್ಕಳು ಬಣ್ಣ ಹಚ್ಚುತ್ತಿರುವುದು ವಿಶೇಷ. ಎರಡನೇ ಮಗಳು ಅಮೂಲ್ಯ ಸುತ್ತ ಚಿತ್ರವು ಸಾಗುತ್ತದೆ.ಮೊದಲನೇ ಮಗಳು ಮಾನ್ಯ ನಾಯಕಿ. ಮೂರನೇ ಪುತ್ರಿ ಪುಟಾಣಿ ಕಾವ್ಯ. ಇವರೊಂದಿಗೆ ರಂಗಭೂಮಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next