Advertisement

ಅತ್ತೆ ಸೊಸೆ ಜಗಳ: ಹಗ್ಗದಿಂದ ಕಟ್ಟಿ 9 ಜನರ ಥಳಿಸಿದ ಗ್ರಾಮಸ್ಥರು

09:56 AM Dec 31, 2019 | keerthan |

ವಿಜಯಪುರ: ಸೊಸೆಯನ್ನು ಕರೆದುಕೊಂಡು ಹೋಗಲು‌ ಬಂದಿದ್ದ ಗಂಡನ ಮನೆಯವರು ಸೊಸೆಯನ್ನು ಹಲ್ಲೆ ಮಾಡಿದ‌‌ ಘಟನೆಯಿಂದ ಕುಪಿತಗೊಂಡ ಗ್ರಾಮಸ್ತರು 9 ಜನರನ್ನು ಹಗ್ಗದಿಂದ ಕಟ್ಟಿ ಥಳಿಸಿದ ಘಟನೆ ಮುದ್ದೇಬಿಹಾಳ ತಾಲೂಕಿನಲ್ಲಿ ಜರುಗಿದೆ.

Advertisement

ಮುದ್ದೇಬಿಹಾಳ ತಾಲೂಕಿನ ಆಲಕೊಪ್ಪ ಗ್ರಾಮದಲ್ಲಿನ ತವರು‌ ಮನೆಯಲ್ಲಿದ್ದ ಸೊಸೆಯ ಮನೆಗೆ‌ ಬಂದಿದ್ದ ಮೂವರು ಮಹಿಳೆಯರು ಹಾಗೂ ಆರು ಜನ ಪುರುಷರನ್ನು ಹಗ್ಗದಿಂದ ಕೈ-ಕಾಲು ಕಟ್ಡಿ ಮನಬಂದಂತೆ ಥಳಿಸಿದ್ದಾರೆ.

ಗಂಡನೊಂದಿಗೆ‌‌ ಜಗಳ ಮಾಡಿಕೊಂಡಿದ್ದ ಕಮಲವ್ವ ವಡ್ಡರ ಎಂಬ ಮಹಿಳೆ ಆಲಕೊಪ್ಪ ಗ್ರಾಮದ ತವರು ಮನೆಗೆ ಬಂದಿದ್ದಳು. ಸೊಸೆಯನ್ನು ಕರೆಯಲು ಬಂದರೂ ಗಂಡನ‌ ಮನೆಗೆ ಬರುವಲ್ಲಿ ತಕರಾರು ಮಾಡಿದಳೆಂದು ಸೊಸೆಯನ್ನು ಆಕೆಯ ತವರು ಮನೆಯಲ್ಲೇ ಗಂಡನ ಮನೆಯವರು ಥಳಿಸಿದ್ದಾರೆ. ಇದರಿಂದ ಕೆರಳಿದ ಗ್ರಾಮಸ್ತರು ಗಂಡನ‌ ಮನೆಯ ಎಲ್ಲರನ್ನೂ ಕಟ್ಟಿ ಹಾಕಿ ಥಳಿಸಿದ್ದಾರೆ.

ಥಳಿತಕ್ಕೊಳಗಾದವರನ್ನು ಬಸವನಬಾಗೇವಾಡಿ ತಾಲೂಕಿನ ಬಿದ್ನಾಳ, ಚಡಚಣ ತಾಲೂಕಿನ ಕಪನಿಂಬರಗಿ, ಇಂಡಿ ತಾಲೂಕಿನ  ಭುಯ್ಯಾರ ಗ್ರಾಮದವರೆಂದು‌ ತಿಳಿದು ಬಂದಿದೆ.

ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ ಮುದ್ದೇಬಿಹಾಳ ಪೊಲೀಸರು ಗಾಯಗಳುಗಳನ್ನು ತಕ್ಷಣ ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಗೆ ರವಾನೆಸಿದ್ದಾರೆ.

Advertisement

ಹಲ್ಲೆ ‌ಮಾಡಿದ ಹಾಗೂ ಹಲ್ಲೆಗೊಳಗಾದವರ ವಿವರ‌ ಲಭ್ಯವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next