Advertisement

Muddebihal: ನೇಹಾ ಕೊಲೆ ಖಂಡಿಸಿ ಪ್ರತಿಭಟನೆ: ಮುಸ್ಲಿಂ ಮುಖಂಡರು ಭಾಗಿ

12:50 PM Apr 20, 2024 | Kavyashree |

ಮುದ್ದೇಬಿಹಾಳ: ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಖಂಡಿಸಿ ಮುದ್ದೇಬಿಹಾಳದಲ್ಲಿ ಜಂಗಮ ಸಮಾಜದ ನೇತೃತ್ವದಲ್ಲಿ ವಿವಿಧ ಸಮಾಜಗಳ ನೂರಾರು ಸದಸ್ಯರು ಪ್ರತಿಭಟನಾ ರ್ಯಾಲಿ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

Advertisement

ಬಜಾರ್ ಹನುಮಾನ ದೇವಸ್ಥಾನದಿಂದ ಬಸವೇಶ್ವರ ವೃತ್ತಕ್ಕೆ ಬಂದ ರ್‍ಯಾಲಿ ರಸ್ತೆ ತಡೆ ನಡೆಸಿ ಬಹಿರಂಗ ಸಭೆ ನಡೆಸಿತು.

ಮುಸ್ಲಿಂ ಸಮಾಜದ ಆದಿಯಾಗಿ ಇತರೆ ಸಮಾಜದ ಮುಖಂಡರು ಘಟನೆ ಖಂಡಿಸಿ ಮಾತನಾಡಿ, ಅಪಾದಿತನನ್ನು ಎನಕೌಂಟರ್ ಮಾಡಲು, ಗಲ್ಲಿಗೇರಿಸಲು ಆಗ್ರಹಿಸಿದರು.

ನಂತರ ತಹಶಿಲ್ದಾರ ಕಚೇರಿಗೆ ಆಗಮಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮುಸ್ಲಿಂ ಸಮಾಜದ ಮುಖಂಡರು ಪಾಲ್ಗೊಂಡು ಘಟನೆ ಖಂಡಿಸಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next