Advertisement

MUDA Site: ಸಚಿವ ಬೈರತಿ ವಿರುದ್ಧ ಕಾನೂನು ಹೋರಾಟ: ಶಾಸಕ ಜಿಟಿಡಿ ಎಚ್ಚರಿಕೆ

09:24 PM Jul 27, 2024 | Team Udayavani |

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ತಮಗೆ ನಿವೇಶನ ನೀಡಲಾಗಿದೆ ಎಂಬ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರ ಆರೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡ, ಸಚಿವರು 7 ದಿನಗಳಲ್ಲಿ ದಾಖಲೆ ಸಮೇತ ಅದನ್ನು ಸಾಬೀತುಪಡಿಸಬೇಕು. ಇಲ್ಲವಾದಲ್ಲಿ ನೋಟಿಸ್‌ ಜಾರಿ ಮಾಡಿ ಕಾನೂನು ಸಮರ ನಡೆಸುತ್ತೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ಧಾರೆ .

Advertisement

ನಾನು ಮುಡಾದಿಂದ ಎಲ್ಲಿಯೂ ನಿವೇಶನ ಪಡೆದಿಲ್ಲ. ನಾನೆಂದೂ ಪೆಟ್ರೋಲ್‌ ಬಂಕ್‌, ಶಿಕ್ಷಣ ಸಂಸ್ಥೆ ನಿರ್ಮಿಸಿಲ್ಲ. ಬಂಗಾರದ ಮನುಷ್ಯ ಚಿತ್ರದಿಂದ ಪ್ರಭಾವಿತನಾಗಿ ಬೇಸಾಯ ಮಾಡಿ, ಕಾನೂನು ಬದ್ಧವಾಗಿ ಜಮೀನು ಖರೀದಿಸಿದ್ದೇನೆ. ಹೀಗಾಗಿ ನನ್ನಂತಹ ರಾಜಕಾರಣಿ ರಾಜ್ಯ ಮಾತ್ರವಲ್ಲ, ದೇಶದಲ್ಲೇ ಇಲ್ಲ ಎಂದು ಸಮರ್ಥಿಸಿಕೊಂಡರು.

ಮುಡಾದ ಶೇ. 90 ಭಾಗ ನನ್ನ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಈ ಭಾಗದಲ್ಲಿ ಅಂದಿನಿಂದ ಇಂದಿನವರೆಗೂ ಒಂದೇ ಒಂದು ನಿವೇಶನ ಪಡೆದಿಲ್ಲ. ಆದರೆ ಗೋವಿಂದರಾಜು ಮುಡಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಲಾಟರಿ ಮುಖೇನ 50*80 ಅಳತೆಯ ನಿವೇಶನ ನನಗೆ ಬಂದಿದೆ ಎಂದು ಸ್ಪಷ್ಟಪಡಿಸಿದರು.


ಕುಮಾರಸ್ವಾಮಿ ದೊಡ್ಡವರು, ಪ್ರಶ್ನಿಸಲು ಸಾಧ್ಯವೇ: ಜಿಟಿಡಿ

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸ್ಥಾನ ತಪ್ಪಿದ್ದರಿಂದ ನನಗೇನೂ ಬೇಸರವಿಲ್ಲ. ನನಗೇಕೆ ತಪ್ಪಿತು ಎಂದು ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಅವರನ್ನು ಕೇಳಲು ಆಗುವುದೇ?, ಅವರು ದೊಡ್ಡವರು ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು. ಪಕ್ಷದ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಅಧ್ಯಕ್ಷರು ಎಲ್ಲರೂ ಒಕ್ಕಲಿಗರೇ ಆಗುತ್ತಾರೆ ಎಂಬ ಕಾರಣದಿಂದ ಕುರುಬ ಸಮುದಾಯಕ್ಕೆ ಜೆಡಿಎಸ್‌ ಶಾಸಕಾಂಗ ಪಕ್ಷದ ಸ್ಥಾನ ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next