Advertisement

MUDA CASE: ಇ.ಡಿ.ದಾಳಿ ರಾಜಕೀಯ ಪ್ರೇರಿತ ಅಲ್ಲ: ಆರ್‌. ಅಶೋಕ್‌

12:32 AM Oct 19, 2024 | Team Udayavani |

ಬೆಂಗಳೂರು: ಮುಡಾ ಕಚೇರಿ ಹಾಗೂ ಜಮೀನು ಮಾಲಕ ದೇವರಾಜ್‌ ನಿವಾಸದ ಮೇಲೆ ಇ.ಡಿ. ಅಧಿಕಾರಿಗಳು ನಡೆಸಿರುವ ದಾಳಿಯಲ್ಲಿ ಕೇಂದ್ರ ಸರಕಾರ ಅಥವಾ ಬಿಜೆಪಿಯ ಕೈವಾಡ ಇಲ್ಲ. ಕಾಂಗ್ರೆಸ್‌ ವಿನಾಕಾರಣ ಆರೋಪ ಮಾಡುತ್ತಿದೆ.

Advertisement

ಪ್ರತೀ ಬಾರಿ ದಾಳಿ ನಡೆದಾಗ ಕಾಂಗ್ರೆಸ್‌ ನಾಯಕರು ಕೇಂದ್ರದ ಮೇಲೆ ದೂರುವುದು ಸರ್ವೇ ಸಾಮಾನ್ಯವಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ್‌ ಹೇಳಿದ್ದಾರೆ.

ಅಷ್ಟಕ್ಕೂ ಇ.ಡಿ.ಗೆ ದೂರು ಕೊಟ್ಟದ್ದು ಬಿಜೆಪಿಯಲ್ಲ. ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬವರು 500 ಪುಟಗಳ ದಾಖಲೆಯನ್ನು ಸಲ್ಲಿಸಿದ್ದರು. ಅಲ್ಲದೆ ಸ್ವತಃ ಇ.ಡಿ. ಅಧಿಕಾರಿಗಳು ಅವರಿಂದ ಹೇಳಿಕೆಯನ್ನು ಪಡೆದಿದ್ದರು. ಇದರಲ್ಲಿ ಬಿಜೆಪಿ ಪಾತ್ರ ಎಲ್ಲಿಂದ ಬರುತ್ತದೆ? ಎಂದು ಪ್ರಶ್ನಿಸಿದರು.

ಸ್ನೇಹಮಯಿ ಕೃಷ್ಣ ಕೊಟ್ಟಿರುವ ದೂರಿನ ಆಧಾರದಲ್ಲಿ ಸಿದ್ದರಾಮಯ್ಯನವರು ವಾಪಸ್‌ ಕೊಟ್ಟ ಸೈಟುಗಳಷ್ಟೇ ಅಲ್ಲ, ಸುಮಾರು 3-4 ಸಾವಿರ ಕೋಟಿ ರೂ. ಅಕ್ರಮವಾಗಿದೆ ಎಂದು ಮರಿಗೌಡ ಅವರೇ ತನಿಖೆಗೆ ಕೋರಿ ಸರಕಾರಕ್ಕೆ ಪತ್ರ ಬರೆದಿದ್ದರು. ಇದಾದ ನಂತರ ಸ್ನೇಹಮಯಿ ದೂರು ಕೊಟ್ಟಿದ್ದಾರೆ. ಖುದ್ದು ಕಾಂಗ್ರೆಸ್‌ನವರೇ ಅಕ್ರಮ ಬಗ್ಗೆ ಹೇಳಿದ್ದಾರೆ. ಹೀಗಾಗಿ ಈ ಇ.ಡಿ. ದಾಳಿ ರಾಜಕೀಯ ಪ್ರೇರಿತ ಅಲ್ಲ ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next