Advertisement

ಮುಂದಿನೆರಡು ಪಂದ್ಯಕ್ಕೆ ಧೋನಿಗೆ ರೆಸ್ಟ್:ರಾಹುಲ್ ಗೆ ಸಿಕ್ಕೀತೇ ಚಾನ್ಸ್

05:48 AM Mar 09, 2019 | Team Udayavani |

ರಾಂಚಿ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಏಕದಿನ ಪಂದ್ಯಗಳಿಗೆ ಭಾರತದ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಅಲಭ್ಯರಾಗುತ್ತಿದ್ದಾರೆ. ಧೋನಿಗೆ ವಿಶ್ರಾಂತಿ ನೀಡಲು ಟೀಂ ಮ್ಯಾನೇಜ್ ಮೆಂಟ್ ನಿರ್ಧರಿಸಿದೆ ಎಂದು ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ. 

Advertisement

ಶುಕ್ರವಾರ ನಡೆದ ಮೂರನೇ ಏಕದಿನ ಪಂದ್ಯದ ನಂತರ ಮಾತನಾಡಿದ ಸಂಜಯ್ ಬಂಗಾರ್, ಧೋನಿಗೆ ಮುಂದಿನೆರಡು ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗುವುದು. ಹಾಗಾಗಿ ಅವರ ಜಾಗದಲ್ಲಿ ಬೇರೆ ಯಾರಾದರೂ ಕಣಕ್ಕಿಳಿಯಲಿದ್ದಾರೆ ಎಂದರು. ಬಹುತೇಕ ರಿಷಭ್ ಪಂತ್ ಧೋನಿ ಸ್ಥಾನವನ್ನು ತುಂಬುವ ಸಾಧ್ಯತೆ ಇದೆ.

ರಾಂಚಿ ಪಂದ್ಯದ ವೇಳೆ ಗಾಯಗೊಂಡಿದ್ದ ಮೊಹಮ್ಮದ್ ಶಮಿ ಕೂಡಾ ಮುಂದಿನ ಪಂದ್ಯಕ್ಕೆ ಲಭ್ಯವಾಗುವುದು ಅನುಮಾನ ಎಂದಿರುವ ಬಂಗಾರ್, ಮೊಹಾಲಿ ಪಂದ್ಯದ ವೇಳೆ ಗುಣಮುಖರಾಗದೇ ಹೋದಲ್ಲಿ ಅವರ ಜಾಗದಲ್ಲಿ ಭುವನೆಶ್ವರ್ ಕುಮಾರ್ ಅವಕಾಶ ಪಡೆಯಲಿದ್ದಾರೆ. ಅಂತಿಮ ನಿರ್ಧಾರ ತಂಡದ ನಾಯಕ ಮತ್ತು ಕೋಚ್ ರದ್ದು ಎಂದರು.


ಆರಂಭಿಕ ಆಟಗಾರ ಶಿಖರ್ ಧವನ್ ರ ಬ್ಯಾಟಿಂಗ್ ವೈಫಲ್ಯದ ಕುರಿತು ಮಾತನಾಡಿದ ಸಂಜಯ್, ಕಳೆದ ನ್ಯೂಜಿಲ್ಯಾಂಡ್ ಸರಣಿಯಲ್ಲಿ ಧವನ್ ಎರಡು ಉತ್ತಮ ಇನ್ನಿಂಗ್ಸ್ ಆಡಿದ್ದರು. ಅವರು ನಮ್ಮ ಮುಖ್ಯ ಆಟಗಾರ ಎಂದು ಅಭಿಪ್ರಾಯ ಪಟ್ಟರು.

ಪಂದ್ಯದ ನಂತರ ಮಾತನಾಡಿದ್ದ ಕೊಹ್ಲಿ, ಈ ಸೋಲಿನಿಂದ ನಮ್ಮ ಮನಸ್ಥಿತಿಯಲ್ಲಿ ಬದಲಾವಣೆಯಾಗದು. ನಮ್ಮ ಮುಂದಿನ ಪಂದ್ಯಗಳಿಗೆ ಒಂದೆರಡು ಬದಲಾವಣೆ ಮಾಡುತ್ತಿದ್ದೇವೆ. ವಿಶ್ವಕಪ್ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಹೊಸಬರಿಗೆ ಅವಕಾಶ ಕೊಡಲಿದ್ದೇವೆ ಎಂದರು.

Advertisement

ಸರಣಿಯ ನಾಲ್ಕನೇ ಪಂದ್ಯ ಮಾರ್ಚ್ 10ರಂದು ಮೊಹಾಲಿಯಲ್ಲಿ ನಡೆಯಲಿದೆ. ಭಾರತ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿರುವುದರಿಂದ ಕೆಲವು ಬದಲಾಣೆ ಕಾಣಬಹುದು. ಶಿಖರ್ ಧವನ್ ಬದಲು ಕೆ.ಎಲ್.ರಾಹುಲ್ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next