Advertisement

ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಬ್ರಾವೋ ಜೊತೆ ಜಗಳವಾಡಿದ ಸಿಎಸ್ ಕೆ ನಾಯಕ ಧೋನಿ

09:57 AM Sep 25, 2021 | Team Udayavani |

ಶಾರ್ಜಾ: ಐಪಿಎಲ್ ನ ಹೈವೋಲ್ಟೆಜ್ ಪಂದ್ಯಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಶುಕ್ರವಾರ ಶಾರ್ಜಾದಲ್ಲಿ ನಡೆಯಿತು. ಧೋನಿ- ಕೊಹ್ಲಿ ನಡುವಿನ ಹಣಾಹಣಿಯಲ್ಲಿ ಧೋನಿ ಪಡೆ ಜಯ ಸಾಧಿಸಿತು.

Advertisement

ಉತ್ತಮ ಆರಂಭ ಪಡೆದಿದ್ದ ಬೆಂಗಳೂರು ತಂಡ ದ್ವಿತೀಯಾರ್ಧದಲ್ಲಿ ರನ್ ಕಲೆ ಹಾಕಲು ಪರದಾಡಿತು. ಸಿಎಸ್ ಕೆ ಬೌಲರ್ ಡ್ವೇನ್ ಬ್ರಾವೋ ಉತ್ತಮ ಬೌಲಿಂಗ್ ಮಾಡಿ ಆರ್ ಸಿಬಿ ಬ್ಯಾಟರ್ ಗಳನ್ನು ಕಟ್ಟಿ ಹಾಕಿದರು.

ಆದರೆ ಬೌಲಿಂಗ್ ವೇಳೆ ಸಿಎಸ್ ಕೆ ನಾಯಕ ಧೋನಿ ಮತ್ತು ಬೌಲರ್ ಬ್ರಾವೋ ಜಗಳವಾಡಿದ್ದಾರೆ. ಸ್ವತಃ ಧೋನಿ ಈ ಬಗ್ಗೆ ಪಂದ್ಯದ ಬಳಿಕ ಹೇಳಿಕೊಂಡಿದ್ದಾರೆ.

“ಹೌದು, ಇಷ್ಟೊಂದು ನಿಧಾನಗತಿಯ ಬೌಲ್ ಹಾಕಬೇಕೆ ಬೇಡವೇ ಎಂಬ ಕುರಿತು ನಾವು ಪ್ರತಿ ಸಲವೂ ಜಗಳವಾಡುತ್ತೇವೆ” ಎಂದು ಎಂ.ಎಸ್ ಹೇಳಿದ್ದಾರೆ.

ಇದನ್ನೂ ಓದಿ:ಐಪಿಎಲ್ ನಲ್ಲಿ ಬೆಳಕಿಗೆ ಬಂದ ಹೊಸ ಪ್ರತಿಭೆ: ವೆಂಕಟೇಶ್ ಅಯ್ಯರ್ ಎಂಬ ಅಚ್ಚರಿ

Advertisement

“ಬ್ರಾವೋ ತನ್ನ ಸ್ಲೋವರ್ ಬಾಲ್ ಗಳಿಂದಲೇ ಪ್ರಸಿದ್ಧ. ಬ್ಯಾಟ್ಸಮನ್ ಕೂಡಾ ಅದನ್ನೇ ನಿರೀಕ್ಷೆ ಮಾಡುತ್ತಾನೆ. ಹೀಗಾಗಿ ಬೇರೆ ಬೇರೆ ಎಸೆತಗಳನ್ನು ಹಾಕುವಂತೆ ನಾನು ಹೇಳಿದೆ. ಲೆಂತ್ ಬಾಲ್, ಯಾರ್ಕರ್ ಹೀಗೆ, ಹೀಗಾಗಿ ಬ್ರಾವೋ ಸ್ಲೋವರ್ ಬಾಲ್ ಹಾಕುದಿಲ್ಲ ಎಂದು ಬ್ಯಾಟ್ಸಮನ್ ಯೋಚನೆ ಮಾಡುತ್ತಾನೆ” ಎಂದು ಧೋನಿ ಹೇಳಿದರು.

ಟಿ20 ಮಾದರಿಯಲ್ಲಿ ಬ್ರಾವೋ ಅದ್ಭುತ ಆಟಗಾರ. ಟಿ20 ಮಾದರಿ ಕ್ರಿಕೆಟ್ ನ್ನು ಆತ ವಿಶ್ವದೆಲ್ಲೆಡೆ ಆಡಿದ್ದಾನೆ. ತಂಡ ಯಾವಾಗ ಬಯಸುತ್ತದೆಯೋ ಆಗ ಬ್ರಾವೋ ಜವಾಬ್ದಾರಿ ಹೊರುತ್ತಾನೆ ಎಂದು ಸಿಎಸ್ ಕೆ ನಾಯಕ ಧೋನಿ ಹೇಳಿದರು.

ಆರ್ ಸಿಬಿ ವಿರುದ್ಧ ನಾಲ್ಕು ಓವರ್ ಬಾಲ್ ಹಾಕಿದ್ದ ಬ್ರಾವೋ ಕೇವಲ 24 ರನ್ ನೀಡಿ ಮೂರು ವಿಕೆಟ್ ಕಿತ್ತರು. 200 ರನ್ ನತ್ತ ಗುರಿ ಇಟ್ಟಿದ್ದ ಆರ್ ಸಿಬಿಯನ್ನು ಕೇವಲ 156 ರನ್ ಗೆ ಕಟ್ಟಿ ಹಾಕುವಲ್ಲಿ ಬ್ರಾವೋ ಪ್ರಮುಖ ಪಾತ್ರ ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next