Advertisement

ದಕ್ಷಿಣ ಆಫ್ರಿಕಾ ಟಿ20 ಸರಣಿ: ಎಂ.ಎಸ್‌.ಧೋನಿ ಆಯ್ಕೆ ಅನುಮಾನ

11:23 PM Aug 28, 2019 | Sriram |

ಹೊಸದಿಲ್ಲಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗಾಗಿ ವಿಕೆಟ್‌ ಕೀಪರ್‌ ಮಹೇಂದ್ರ ಸಿಂಗ್‌ ಧೋನಿ ಅವರನ್ನು ಆಯ್ಕೆ ಮಾಡುವುದು ಅನುಮಾನ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ. ಮುಂದಿನ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ಗಮನದಲ್ಲಿರಿಸಿ ಯುವ ಪಡೆಯೊಂದನ್ನು ಸಜ್ಜುಗೊಳಿಸುವುದು ಭಾರತದ ಯೋಜನೆಯಾಗಿರುವುದೇ ಇದಕ್ಕೆ ಕಾರಣ.

Advertisement

“ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾ ವಳಿಗೂ ಮುನ್ನ ಭಾರತ ಕೇವಲ 22 ಪಂದ್ಯಗಳನ್ನು ಆಡಲಿದೆ. ಇದಕ್ಕಾಗಿ ಯುವ ಹಾಗೂ ಪ್ರತಿಭಾನ್ವಿತ ಆಟಗಾರರ ತಂಡವನ್ನು ಕಟ್ಟಬೇಕಿದೆ. ಆಯ್ಕೆ ಮಂಡಳಿ ಈ ನಿಟ್ಟಿನಲ್ಲಿ ಮುಂದಡಿ ಇಡಲಿದೆ. ಸಂಭಾವ್ಯ ತಂಡದಲ್ಲಿ, ಮುಖ್ಯವಾಗಿ ಟಿ20ಯಲ್ಲಿ 3 ಮಂದಿ ಕೀಪರ್‌ಗಳನ್ನು ಸಜ್ಜಾಗಿರಿಸುವುದು ಆಯ್ಕೆ ಮಂಡಳಿಯ ಯೋಜನೆ’ ಎಂಬುದಾಗಿ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ಹೇಳಿದರು.
ರಿಷಭ್‌ ಪಂತ್‌ ಜತೆಗೆ ಸಂಜು ಸ್ಯಾಮ್ಸನ್‌ ಮತ್ತು “ಎ’ ತಂಡದ ಖಾಯಂ ಸದಸ್ಯ ಇಶಾನ್‌ ಕಿಶನ್‌ ಅವರನ್ನು 2ನೇ ಹಾಗೂ 3ನೇ ಕೀಪಿಂಗ್‌ ಸ್ಥಾನಕ್ಕೆ ಸಜ್ಜುಗೊಳಿಸುವ ಸಾಧ್ಯತೆ ಇದೆ.

ಭಾರತ-ದ.ಆಫ್ರಿಕಾ ನಡುವೆ 3 ಟಿ20 ಪಂದ್ಯಗಳನ್ನು ಆಡಲಾ ಗುವುದು. ಸೆ. 15ರಂದು ಧರ್ಮ ಶಾಲಾದಲ್ಲಿ ಮೊದಲ ಮುಖಾಮುಖೀ ನಡೆಯಲಿದೆ. ಉಳಿದೆರಡು ಪಂದ್ಯಗಳು ಮೊಹಾಲಿ (ಸೆ. 18) ಮತ್ತು ಬೆಂಗಳೂರಿನಲ್ಲಿ (ಸೆ. 22) ನಡೆಯಲಿವೆ. ಸೆ. 4ರಂದು ಭಾರತ ತಂಡವನ್ನು ಆರಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next