Advertisement

ಧೋನಿ ಮೇಲೆ ವಿಶ್ವಾಸವಿಡಿ

07:25 AM Apr 27, 2018 | |

ಬೆಂಗಳೂರು: ತಾಳ್ಮೆಯಿಂದಿರಿ ಮತ್ತು ಎಂಎಸ್‌ ಧೋನಿ ಮೇಲೆ ವಿಶ್ವಾಸವಿಡಿ. ಭಾರತ ತಂಡದ ಮಾಜಿ ನಾಯಕ ಮತೊ¾ಮ್ಮೆ ವರ್ಷವೆಂಬುದು ಅವರ ಪಾಲಿಗೆ ಕೇವಲ ಸಂಖ್ಯೆ ಎಂಬುದನ್ನು ನಿರೂಪಿಸಿದ್ದಾರೆ. ಬುಧವಾರ ನಡೆದ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ ಧೋನಿ ಕೇವಲ 34 ಎಸೆತಗಳಲ್ಲಿ  ಅಜೇಯ 70 ರನ್‌ ಸಿಡಿಸಿ ಚೆನ್ನೈಗೆ ಐದು ವಿಕೆಟ್‌ಗಳ ರೋಚಕ ಗೆಲುವು ತಂದುಕೊಟ್ಟಿದ್ದರು.

Advertisement

ಗೆಲ್ಲಲು 206 ರನ್‌ ಗಳಿಸುವ ಕಠಿನ ಗುರಿ ಪಡೆದಿದ್ದ ಚೆನ್ನೈ ತಂಡಕ್ಕೆ ಧೋನಿ ಮತ್ತು ರಾಯುಡು ಭರ್ಜರಿ ಆಟವಾಡಿ ಆಸರೆಯಾಗಿ ನಿಂತರು. ಏಳು ಸಿಕ್ಸರ್‌ ಸಿಡಿಸಿದ ಧೋನಿ ಬೆಂಗಳೂರು ತಂಡಕ್ಕೆ ಸಿಂಹಸ್ವಪ್ನರಾದರು. ಅಂತಿಮ ಓವರಿನಲ್ಲಿ ಚೆನ್ನೈ ಗೆಲುವಿಗೆ 17 ರನ್‌ ಬೇಕಾಗಿತ್ತು. ಸಿಕ್ಸರ್‌ ಸಿಡಿಸುವ ಮೂಲಕ ಧೋನಿ ಇನ್ನೂ ಎರಡು ಎಸೆತ ಬಾಕಿ ಇರುವಾಗಲೇ ತಂಡದ ಗೆಲುವು ಸಾರಿದರು. ಧೋನಿ ಮತ್ತೂಮ್ಮೆ ಮ್ಯಾಚ್‌ ಫಿನಿಶರ್‌ ಎಂಬುದನ್ನು ಸಾಬೀತುಪಡಿಸಿದರು. ಈ ಮೊದಲು ಡ್ವೇನ್‌ ಬ್ರಾವೊ ಒಂದು ಸಿಕ್ಸರ್‌ ಮತ್ತು ಒಂದು ಬೌಂಡರಿ ಬಾರಿಸಿ ತಂಡದ ಗೆಲುವು ಖಚಿತಪಡಿಸಿದ್ದರು.

ಈ ಮೊದಲು ಧೋನಿ ಮತ್ತು ರಾಯುಡು ಶತಕದ ಜತೆಯಾಟ ನಡೆಸಿ ಕುಸಿತ ತಂಡಕ್ಕೆ ಆಸರೆಯಾಗಿದ್ದರಲ್ಲದೇ ತಂಡದ ಗೆಲುವಿನ ಆಸೆಗೆ ಜೀವ ತುಂಬಿದ್ದರು. ರಾಯುಡು 43 ಎಸೆತಗಳಿಂಧ 4 ಬೌಂಡರಿ ಮತ್ತು 8 ಸಿಕ್ಸರ್‌ ನೆರವಿನಿಂದ 83 ರನ್‌ ಹೊಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next