Advertisement

ಲೂಟಿ ಮಾಡಿರುವ  ಹಣದಲ್ಲಿ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದೆ: ಸಂಸದ ವಿ.ಶ್ರೀನಿವಾಸಪ್ರಸಾದ್‌

12:58 PM Mar 01, 2022 | Team Udayavani |

 

Advertisement

ಚಾಮರಾಜನಗರ: ಕಾಂಗ್ರೆಸ್‌ ಪಕ್ಷ ಮೇಕೆದಾಟು ಪಾದಯಾತ್ರೆ ನಡೆಸುತ್ತಿರುವುದು ಕಾನೂನು ಬಾಹಿರವಾಗಿ ಲೂಟಿ ಮಾಡಿರುವ ಹಣದ ಕೂರುಪಿ ಪ್ರದರ್ಶನ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್‌ ಕಿಡಿಕಾರಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೋ ವ್ಯಕ್ತಿಯ ಪ್ರಚಾರಕ್ಕೆ ಮಾಡುತ್ತಿರುವ ಕಾರ್ಯಕ್ರಮ ಇದು. ಪಾದಯಾತ್ರೆಗೆ ಹಣ ಎಲ್ಲಿಂದ ಬರುತ್ತದೆ?ಬರುವವರೆಲ್ಲರಿಗೂ ಉಚಿತ ಪೆಟ್ರೋಲ್, ಊಟ, ತಿಂಡಿ,ದುಡ್ಡು, ಬಿರಿಯಾನಿ ಎಲ್ಲಿಂದ ಕೊಡ್ತಿದಾರೆ? ಇದನ್ನು ಪಾದಯಾತ್ರೆ ಎಂದು ಕರೆಯುತ್ತಾರೆಯೇ? ಎಂದು ವ್ಯಂಗ್ಯವಾಡಿದರು.

ಇದು ಪಾದಯಾತ್ರೆ ಮಾಡುವ ಸಮಯವಲ್ಲ. ಕಾಂಗ್ರೆಸ್‌ ಪಾದಯಾತ್ರೆ ಒಂದು ಅಪಹಾಸ್ಯ.ಮೇಕೆದಾಟು ಯೋಜನೆಯ ವಿಚಾರಣೆ ಸುಪ್ರೀಂ ಕೋರ್ಟ್‌ ಮುಂದಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರ್ವ ಪಕ್ಷ ನಿಯೋಗ ಕೇಂದ್ರಕ್ಕೆ ಹೋಗಲಿ ಎಂದರು. ಕಾಂಗ್ರೆಸ್‌ ನವರು ಜನಗಳ ಮುಂದೆ ಬೆತ್ತಲಾಗಿದ್ದಾರೆ. ಬೀದಿಯಲ್ಲಿ ಅರಚಾಡಿ,ಕಿರುಚಾಡಿಕೊಂಡು ಪಾದಯಾತ್ರೆ ಮಾಡಿದರೆ ಅದಕ್ಕೆ ಅರ್ಥ ಇದೆಯೇ? ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next