Advertisement

ಚಾಮರಾಜನಗರ ಕೇಸ್ : ಕರೆ ಮಾಡಿದಾಗ ಡಿಸಿ ಇಲ್ಲಿ ಯಾವ ಸಮಸ್ಯೆ ಎಂದಿದ್ರು: ಶ್ರೀನಿವಾಸ್ ಪ್ರಸಾದ್

01:32 PM May 03, 2021 | Team Udayavani |

ಮೈಸೂರು : ನಾನು ಚಾಮರಾಜನಗರ ಜಿಲ್ಲಾಧಿಕಾರಿಗೆ ರಾತ್ರಿ ಕರೆ ಮಾಡಿ ವಿಚಾರಿಸಿದ್ದೆ. ಆ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಇಲ್ಲಿ ಯಾವುದೇ ತೊಂದರೆ ಇಲ್ಲ ಅಂತ ಹೇಳಿದ್ರು ಎಂದು ಮೈಸೂರಿನಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ನಿನ್ನೆ ಡಿಸಿ ಜೊತೆ ಮಾತನಾಡಿದ ವೇಳೆ‌ ಆಕ್ಸಿಜನ್ ಕೊರತೆ ಬಗ್ಗೆ ನನಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿಲ್ಲ. ಕೋವಿಡ್ ಕಾರಣದಿಂದ ನಾನು ಚಾಮರಾಜನಗರಕ್ಕೆ ಹೋಗುತ್ತಿಲ್ಲ ಎಂದರು. ಮೊದಲನೇ ಅಲೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರವೇ ಚಾಮರಾಜನಗರ ಕೋವಿಡ್ ನಿರ್ವಹಣೆ ಬಗ್ಗೆ ಮೆಚ್ವುಗೆ ವ್ಯಕ್ತಪಡಿಸಿತ್ತು. ಆ ವೇಳೆ ಒಂದೇ ಒಂದು ಪ್ರಕರಣ ದಾಖಲಾಗಿರಲಿಲ್ಲ. ಈಗ ನಡೆದಿರು ಘಟನೆ ದುರದೃಷ್ಟಕರ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿಕೆ ನೀಡಿದ್ದಾರೆ.

ಆಕ್ಸಿಜನ್ ಸಿಗದೆ ಸಾವನ್ನಪ್ಪಿರುವವರ ಕುಟುಂಬಗಳಿಗೆ ಪರಿಹಾರ ನೀಡಬೇಕು. ಹೆಚ್ಚಿನ ಪರಿಹಾರಕ್ಕೆ ನಾನು ಒತ್ತಾಯ ಮಾಡುತ್ತೇನೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next