Advertisement

ಕೋಡಿಹಳ್ಳಿ ಅವರ ಹೋರಾಟದಲ್ಲಿ ರಾಜಕೀಯ ವಾಸನೆ ಇದೆ : ಸಂಸದೆ ಶೋಭಾ ಕರಂದ್ಲಾಜೆ ಕಿಡಿ

05:05 PM Dec 14, 2020 | Suhan S |

ಚಿಕ್ಕಮಗಳೂರು : ಕೋಡಿಹಳ್ಳಿ ಚಂದ್ರಶೇಖರ್ ಗೂ ಸಾರಿಗೆ ಸಂಸ್ಥೆ ಗೂ ಏನು ಸಂಬಂಧವಿದೆ.ಅವರು ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿರುವ  ಕುರಿತು ಸಾರಿಗೆ ನೌಕರರು ಯೋಚನೆ ಮಾಡಬೇಕು. ಸಾರಿಗೆ ನೌಕರರ ಹೋರಾಟದಲ್ಲಿ ಖಾಸಗಿ ವ್ಯಕ್ತಿ ಬೇಡಿಕೆಯಿಡುವುದು ಸಂಶಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ವಾಗ್ದಾಳಿ ನಡೆಸಿದರು.

Advertisement

ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಸಾರಿಗೆ ನೌಕರರ ಹೋರಾಟಕ್ಕೆ ನೇತೃತ್ವವಹಿಸಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕಿಡಿಕಾಡಿದರು.ಕೋಡಿಹಳ್ಳಿ ಅವರ ಹೋರಾಟದಲ್ಲಿ ರಾಜಕೀಯ ವಾಸನೆ ಇದೆ. ಇದರ ಹಿಂದೆ ಕಾಂಗ್ರೆಸ್ ಇರುವ ಭೀತಿ ಹಾಗೂ ಸಂಶಯವಿದೆ.ಕೋಡಿಹಳ್ಳಿ ಚಂದ್ರಶೇಖರ್ ರೈತರ ಬಿಲ್ ಹಿಡಿದುಕೊಂಡು ಹೋರಾಟಕ್ಕೆ ಬಂದವರು,ಸಾರಿಗೆ ನೌಕರರ ಹೋರಾಟಕ್ಕೆ ಬೆಂಬಲ ನೀಡಿ ನೇತೃತ್ವವಹಿಸಿಕೊಂಡದ್ದರ ಹಿಂದೆ ಯಾವುದೋ ರಾಜಕೀಯ ಪಕ್ಷದ ಕೈವಾಡ ಇರಬಹುದೆಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ಯಳಂದೂರಿನಲ್ಲೂ ‘ಪಂಚಲಿಂಗ ದರ್ಶನ’: ಐತಿಹ್ಯ ಸಾರುವ 450 ವರ್ಷಗಳ ‘ಬಳೇಮಂಟಪ’

ಕೋಡಿಹಳ್ಳಿ ರೈತರ ಬಗ್ಗೆ ಹೋರಾಟ ಮಾಡಿದರೆ ಗೌರವ ಇದೆ.ಆದರೆ ಇವತ್ತು ಸಾರಿಗೆ ನೌಕರರ ಹೋರಾಟಕ್ಕೆ ಬೆನ್ನುಲುಬಾಗಿ ನಿಂತಿರುವ ಹಿಂದೆ ಏನೋ ಒಂದು ಕಾರಣವಿರಬಹುದೆಂದರು. ಸಾರಿಗೆ ನೌಕಕರು ದಾರಿ ತಪ್ಪಬಾರದು. ನಿಮಗೂ ಒಂದು ಬದುಕಿದೆ. ನೌಕಕರೇ ನಿಮ್ಮನ್ನು ನಂಬಿಕೊಂಡು ನಿಮ್ಮ ಕುಟುಂಬ ಇದೆ. ಸರ್ಕಾರ ನಿಮ್ಮ ಜೊತೆ ಇದೆ ನೀವು ನೇರವಾಗಿ ಸಿಎಂ ಹಾಗೂ ಸಚಿವರ ಜೊತೆ ಮಾತಾನಾಡಿ ಸಮಸ್ಯೆ ಪರಿಹಾರಿಸಿಕೊಳ್ಳಬಹುದು. ಸಾರಿಗೆ ನಿಗಮ ನಷ್ಟ ವಾದರೆ ನಿಮಗೆ ತೊಂದರೆಯಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next