Advertisement

ಮದುವೆಯಾಗಿ ಓಡಿ ಹೋಗುವುದೇ ಈಕೆಯ ಕಾಯಕ : 8 ಪುರುಷರಿಗೆ ದೋಖಾ!

07:48 PM Feb 03, 2022 | Team Udayavani |

ಭೋಪಾಲ್ : 28ರ ಹರೆಯದ ಯುವತಿಯೊಬ್ಬಳು ಮದುವೆಯಾಗುವುದನ್ನೇ ಕಾಯಕವಾಗಿಸಿಕೊಂಡು 8 ಕ್ಕೂ ಹೆಚ್ಚು ಪುರುಷರಿಗೆ ವಂಚಿಸಿ ಈಗ ಪೋಲೀಸರ ಅತಿಥಿಯಾಗಿದ್ದಾಳೆ.

Advertisement

ಊರ್ಮಿಳಾ ಅಹಿರ್ವಾರ್ ಅಲಿಯಾಸ್ ರೇಣು ರಜಪೂತ್ ಎಂಬಾಕೆ ಒಬ್ಬರಾದ ಬಳಿಕ ಒಬ್ಬರು ಪುರುಷರನ್ನು ಮದುವೆಯಾಗಿ ಚಿನ್ನಾಭರಣ ಮತ್ತು ಹಣದೊಂದಿಗೆ ಓಡಿಹೋಗಿದ್ದಳು. ಆಕೆಯ ವಂಚನೆಯ ಜಾಡು ಹಿಡಿದ ಪೊಲೀಸರು, ಆಕೆಯೊಂದಿಗೆ ಕೃತ್ಯಗಳಿಗೆ ಸಹಕರಿಸಿದ ಇತರ ಮೂವರನ್ನು ಬಂಧಿಸಲಾಗಿದೆ ಎಂದು ಗುರುವಾರ ತಿಳಿಸಿದ್ದಾರೆ.

ಬಂಧಿತ ಇತರ ಮೂವರು ಆರೋಪಿಗಳನ್ನು ಅರ್ಚನಾ ಬರ್ಮನ್ ಅಲಿಯಾಸ್ ಅರ್ಚನಾ ರಜಪೂತ್ (40), ಭಾಗಚಂದ್ ಕೋರಿ (22) ಮತ್ತು ಅಮರ್ ಸಿಂಗ್ (50) ಎಂದು ಗುರುತಿಸಲಾಗಿದೆ.

ಅವರ ಇತ್ತೀಚಿನ ಬಲಿಪಶು ಸಿಯೋನಿ ಜಿಲ್ಲೆಯ ನಿವಾಸಿ 41 ರ ಹರೆಯದ ವ್ಯಕ್ತಿ  ದಶರಥ್ ಪಟೇಲ್  ಎಂದು ಒಮ್ಟಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಸ್‌ಎಸ್ ಬಘೆಲ್ ಹೇಳಿದ್ದಾರೆ.

ಆಕೆಯನ್ನು ಬಂಧಿಸಿದ ನಂತರ, ಈ ಹಿಂದೆ ಇತರ ಏಳು ಪುರುಷರನ್ನು ವಂಚಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ. ಒಬ್ಬ ವ್ಯಕ್ತಿಯನ್ನು ಮದುವೆಯಾಗಿ ಕೆಲವು ದಿನಗಳ ನಂತರ ಚಿನ್ನಾಭರಣ ಮತ್ತು ನಗದಿನೊಂದಿಗೆ ಪರಾರಿಯಾಗುವುದನ್ನೇ ಕಾಯಕ ಮಾಡಿಕೊಂಡಿದ್ದಳು ಎಂದು ಇನ್ಸ್‌ಪೆಕ್ಟರ್ ಬಘೆಲ್ ಹೇಳಿದ್ದಾರೆ.

Advertisement

ಆಕೆ ರಾಜಸ್ಥಾನದ ಜೈಪುರ, ಕೋಟಾ ಮತ್ತು ಧೋಲ್‌ಪುರ ಮತ್ತು ಮಧ್ಯಪ್ರದೇಶದ ದಾಮೋಹ್ ಮತ್ತು ಸಾಗರ್‌ನಲ್ಲಿ ಪುರುಷರನ್ನು ವಂಚಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸದ್ಯ ಮೋಸ ಹೋದ ದಶರಥ್ ಪಟೇಲ್ ಅವರ ದೂರಿನ ಪ್ರಕಾರ, ಮಂಗಳವಾರ ಜಬಲ್ಪುರದಲ್ಲಿ ಮದುವೆ ಸಮಾರಂಭದ ನಂತರ ದಂಪತಿಗಳು ಕಾರಿನಲ್ಲಿ ಅವರ ಗ್ರಾಮಕ್ಕೆ ತೆರಳಿದ್ದರು. ಒಂದು ಹಂತದಲ್ಲಿ ಊರ್ಮಿಳಾ ಕೆಳಗಿಳಿದು, ಅಸೌಖ್ಯವಿದೆ ಎಂದು ಹೇಳಿದ್ದಾಳೆ ಆಗ ಭಾಗಚಂದ್ ಕೋರಿ ಬೈಕಿನಲ್ಲಿ ಸ್ಥಳಕ್ಕೆ ಬಂದು ಪಟೇಲ್ ಅವರು ನೀಡಿದ್ದ ನಗದು ಮತ್ತು ಚಿನ್ನಾಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next