Advertisement

ಗಲಭೆ ಹಿನ್ನಲೆ: ಸಂಸದ ನಳಿನ್‌ ರಷ್ಯಾ ಪ್ರವಾಸ ಅರ್ಧಕ್ಕೆ ಮೊಟಕು  

04:42 PM Jul 11, 2017 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಮತ್ತು  ಹಿಂದೂ ಪರ ಸಂಘಟನೆಗಳ ನಾಯಕರ ಬಂಧನ ಯತ್ನ ಕಾರಣಕ್ಕಾಗಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು  ರಷ್ಯಾ ಪ್ರವಾಸ ಅರ್ಧದಲ್ಲೇ ಮೊಟಕುಗೊಳಿಸಿದ್ದಾರೆ. 

Advertisement

ನಳಿನ್ ಕುಮಾರ್‌ ಸ್ಪೀಕರ್‌ ಅನುಮತಿ ಪಡೆದು  ಸ್ವದೇಶಕ್ಕೆ ವಾಪಾಸಾಗುತ್ತಿದ್ದು ನಾಳೆ  ಮಂಗಳೂರಿಗೆ ಆಗಮಿಸಲಿದ್ದಾರೆ.

ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ ನೇತೃತ್ವದ ಸಂಸದೀಯ ನಿಯೋಗ ಜು. 10ರಿಂದ 13ರ ವರೆಗೆ ರಷ್ಯಾಕ್ಕೆ ಭೇಟಿ ನೀಡಿದ್ದು, ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು ನಿಯೋಗದ ಸದಸ್ಯರಾಗಿದ್ದರು. 

ಜು. 10ರಂದು ರಾತ್ರಿ ಮಾಸ್ಕೋಗೆ ತೆರಳಿದ್ದ ನಿಯೋಗ 3 ದಿನ ರಷ್ಯಾ ಫೆಡರೇಶನ್‌ನ ವಿವಿಧ ಸಭೆಗಳಲ್ಲಿ ಭಾಗವಹಿಸಿ  ಜು. 14ರಂದು ಭಾರತಕ್ಕೆ ಮರಳಲಿದೆ. 

ಸಂಸದರಾದ ಹೇಮ ಮಾಲಿನಿ, ಡಾ| ವೀರೇಂದ್ರಕುಮಾರ್‌,ಮಹಮ್ಮದ್‌ ಸಲೀಂ ಹಾಗೂ ಅಧಿಕಾರಿ ಗಳು ಸಂಸದೀಯ ನಿಯೋಗದ ಸದಸ್ಯರಾಗಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next