Advertisement

ಅಮಾಯಕರ ಪರ ನಾವು: ಸಂಸದ

04:10 PM Dec 21, 2020 | Suhan S |

ಕೋಲಾರ: ಸಿಪಿಎಂನವರು ಮಾತ್ರ ಕಾರ್ಮಿಕರ ಪರವಾ ಎಂದು ಪ್ರಶ್ನಿಸಿದ ಸಂಸದ ಎಸ್‌.ಮುನಿಸ್ವಾಮಿ, ನಾವೂ ತಪ್ಪು ಮಾಡದ ಅಮಾಯಕ ಕಾರ್ಮಿಕರ ಪರ ನಿಲ್ಲಲು ಬದ್ಧ, ಆದರೆ ಉದ್ದೇಶಪೂರ್ವಕವಾಗಿ ದಾಂಧಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳದೇ ಬಿಡಲು ಸಾಧ್ಯವೇ ಎಂದರು.

Advertisement

ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಕಾರ್ಮಿಕರ ಪರ ಎಂದು ಹೇಳಿಕೊಂಡು ಉದ್ದೇಶಪೂರ್ವಕವಾಗಿ ದುಷ್ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ, ಸಂಘಟನೆಗಳವರು ಏನೇನು ಮಾಡಿದ್ದಾರೆ ಎಂದು ನನಗೆ ಗೊತ್ತಿದೆ ಎಂದರು.

ಏಳು ಸಾವಿರ ಕಾರ್ಮಿಕರ ಮೇಲೆ ಎಫ್‌ ಐಆರ್‌ ಹಾಕಿದ್ದರೆ ಅದನ್ನು ತೆಗೆಸುತ್ತೇವೆ, ತಪ್ಪು ಮಾಡದವರು ಹೆದರುವ ಅಗತ್ಯವಿಲ್ಲ. ಯುವಕರು, ನಿರುದ್ಯೋಗಿಗಳ ಪರ ಕೇಂದ್ರ, ರಾಜ್ಯ ಸರ್ಕಾರಗಳು ಇವೆ. ಡೀಸಿ ಆಫೀಸ್‌ಮುಂದೆ ಪ್ರತಿಭಟನೆ ಮಾಡಿದವರು ಮಾತ್ರ ಕಾರ್ಮಿಕರ ಪರ ಅಲ್ಲ ಎಂದರು.

ಕಂಪನಿಯೂ ಕ್ರಮ, ಉಪಾಧ್ಯಕ್ಷರ ವಜಾ:ನೌಕರರಿಗೆ ವೇತನ ಸಿಗುವಲ್ಲಿ ಆಗಿರುವ ಅನ್ಯಾಯಕ್ಕೆ ಸಂಬಂಧಿಸಿದಂತೆ ಕಂಪನಿ ತನ್ನ  ಉಪಾಧ್ಯಕ್ಷರನ್ನು ವಜಾ ಮಾಡಿದೆ. ಕಂಪನಿ ಕಡೆಯಿಂದ ಆಗಿರುವ ಲೋಪಕ್ಕೆ ಕ್ಷಮೆ ಕೋರಿದೆ ಎಂದ ಅವರು, ನಾವೂ ಕಾರ್ಮಿಕ ಗುತ್ತಿಗೆದಾರರ ಮೇಲು ಕೇಸ್‌ ಹಾಕುತ್ತೇವೆ ಎಂದರು.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್‌ ಕೋಲಾರದಲ್ಲಿ ಹಾದು ಹೋಗುವುದರಿಂದ ಕೈಗಾರಿಕೆಗಳು ಹೆಚ್ಚಾಗಿ ಕೋಲಾರದತ್ತ ಬರುತ್ತವೆ ಘಟನೆಯಿಂಕೈಗಾರಿಗಳು ಬರುವುದಕ್ಕೆ ಯಾವುದೇ  ತೊಂದರೆಯಾಗದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಸಮಸ್ಯೆ ಪರಿಹಾರಕ್ಕೆ ಶೀಘ್ರ ಸಭೆ-ಭರವಸೆ: ವಿಸ್ಟ್ರಾನ್‌ ಕಂಪನಿ ಸಮಸ್ಯೆ ಪರಿಹಾರಕ್ಕೆ ಶೀಘ್ರಬೃಹತ್‌ ಕೈಗಾರಿಕಾ ಸಚಿವರ ಅಧ್ಯಕ್ಷತೆಯಲ್ಲಿ ಕಂಪನಿ ಹೆಚ್‌ಆರ್‌ಗಳು, ಎಂಡಿಗಳ ಸಭೆ ಹಾಗೂ ಕಾರ್ಮಿಕರ ಸಭೆಗಳನ್ನು ಪ್ರತ್ಯೇಕವಾಗಿ ಕರೆದು ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಹನುಮಪ್ಪ, ಕೆಯುಡಿಎ ಅಧ್ಯಕ್ಷ ಓಂಶಕ್ತಿ ಚಲಪತಿ, ನಗರಸಭೆ ಸದಸ್ಯ ಮುರಳಿ ಗೌಡ, ನಗರಾಭಿವೃದ್ದಿ ಪ್ರಾಕಾರದ ಸದಸ್ಯ ಅಪ್ಪಿನಾರಾಯಣಸ್ವಾಮಿ ಮತ್ತಿತರರಿದ್ದರು.

ಕೋಲಾರ ಜಿಲ್ಲೆಯ ಭವಿಷ್ಯಕ್ಕೆ ಕುತ್ತು :

ಇಂತಹ ಘಟನೆಗಳು ಕೋಲಾರ ಜಿಲ್ಲೆಯ ಭವಿಷ್ಯಕ್ಕೆ ಕುತ್ತು ತರುತ್ತವೆ. ಜಿಲ್ಲೆಯಲ್ಲಿಕೈಗಾರಿಕಾಭಿವೃದ್ಧಿಗೆ6 ಸಾವಿರ ಎಕರೆ ಜಾಗಗುರುತಿಸಿದ್ದೇವೆ. ಇನ್ನೂ ಕೈಗಾರಿಕೆಗಳುಬರಲಿವೆ ಎಂದು ಸಂಸದರು ತಿಳಿಸಿದರು. ಚೀನಾ ಮಾಧ್ಯಮಗಳು ಭಾರತಕ್ಕೆ ಹೋದರೆ ಇಂತಹ ಗತಿ ಬರುತ್ತವೆ ಎಂದುವಿಸ್ಟ್ರಾನ್‌ ಕಂಪನಿ ಘಟನೆ ಉದಾಹರಿಸಿ ಇತರೆ ಕಂಪನಿಗಳಿಗೆ ಎಚ್ಚರಿಕೆ ನೀಡಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ಭಾರತದಲ್ಲಿ ಉದ್ಯೋಗದಾತರ ಪರ ಸರ್ಕಾರಗಳಿವೆ, ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಅಶೋಕ್‌, ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಹೂಡಿಕೆದಾರರೊಂದಿಗೆ ಮಾತನಾಡಿ ಸೌಹಾರ್ದತೆಕಾಪಾಡಿಕೊಂಡಿದ್ದಾರೆ ಯಾವುದೇ ಕಂಪನಿಗಳು ಎಲ್ಲೂಹೋಗಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next