Advertisement

ಮಾಟ ಮಂತ್ರದ ಶಂಕೆ : ಮಾವನ ಶಿರಚ್ಛೇದ ; ರುಂಡ, ಕೊಡಲಿಯೊಂದಿಗೆ ಬೀದಿಗೆ ಬಂದ

02:44 PM May 14, 2022 | Team Udayavani |

ಸಿಧಿ : ಮಾಟಮಂತ್ರದ ಶಂಕೆಯಿಂದ ವ್ಯಕ್ತಿಯೊಬ್ಬ ತನ್ನ 60 ವರ್ಷ ಪ್ರಾಯದ ಮಾವನ (ತಾಯಿಯ ಸಹೋದರ) ಶಿರಚ್ಛೇದನ ಮಾಡಿ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಕತ್ತರಿಸಿದ ತಲೆ ಮತ್ತು ಕೊಡಲಿಯೊಂದಿಗೆ ಎರಡು ಕಿಲೋಮೀಟರ್ ರಸ್ತೆಯಲ್ಲಿ ನಡೆದಿದ್ದಾನೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

Advertisement

ಜಿಲ್ಲಾ ಕೇಂದ್ರದಿಂದ ಸುಮಾರು 10 ಕಿಮೀ ದೂರದಲ್ಲಿರುವ ಜಾಮೋದಿ ಪೊಲೀಸ್ ಠಾಣೆ ವ್ಯಾಪ್ತಿಯ ಕರಿಮತಿ ಗ್ರಾಮದಲ್ಲಿ ಶುಕ್ರವಾರ ಈ ಬೆಚ್ಚಿ ಬೀಳುವ ಘಟನೆ ಸಂಭವಿಸಿದೆ, 26 ವರ್ಷದ ಆರೋಪಿ ತನ್ನ ಮಾವ ಮಾಟಮಂತ್ರ ಮಾಡುವ ಮೂಲಕ ತನಗೆ ಸಮಸ್ಯೆ ಸೃಷ್ಟಿಸುತ್ತಿರುವ ಶಂಕೆ ವ್ಯಕ್ತಪಡಿಸಿ ಕೃತ್ಯ ಎಸಗಿದ್ದಾನೆ.

ಆರೋಪಿ ಲಾಲಬಹದ್ದೂರ್ ಗೌಡ್ ಶುಕ್ರವಾರ ತನ್ನ ಮಾವ ಮಕ್ಸೂದನ್ ಸಿಂಗ್ ಗೌಡ್ ನ ಮನೆಗೆ ಹೋಗಿ ವಾಗ್ವಾದದ ಬಳಿಕ ಕೊಡಲಿಯಿಂದ ಕುತ್ತಿಗೆ ಕಡಿದಿದ್ದಾನೆ ಎಂದು ಜಾಮೋದಿ ಪೊಲೀಸ್ ಠಾಣೆ ಪ್ರಭಾರಿ ಶೇಷಮಣಿ ಮಿಶ್ರಾ ತಿಳಿಸಿದ್ದಾರೆ.

ಹತ್ಯೆಯ ನಂತರ, ಆರೋಪಿ ತನ್ನ ಕೈಯಲ್ಲಿ ಕತ್ತರಿಸಿದ ತಲೆ ಮತ್ತು ಕೊಡಲಿಯನ್ನು ಹಿಡಿದುಕೊಂಡು ಪೊಲೀಸ್ ಠಾಣೆಯತ್ತ ನಡೆಯಲು ಪ್ರಾರಂಭಿಸಿದ, ಆದರೆ ಪೊಲೀಸರು ಎಚ್ಚರಗೊಂಡು ಆತನನ್ನು ಮಾರ್ಗ ಮಧ್ಯದಲ್ಲೇ ಬಂಧಿಸಿದ್ದಾರೆ ಎಂದು ಮಿಶ್ರಾ ಹೇಳಿದರು.

ಮಾವ ತನಗೆ ಮಾಟಮಂತ್ರದ ಮೂಲಕ ಸಮಸ್ಯೆ ಸೃಷ್ಟಿಸುತ್ತಿದ್ದು, ಹೀಗೆ ಮಾಡದಂತೆ ಹಲವು ಬಾರಿ ಕೇಳಿಕೊಂಡಿದ್ದಾಗಿ ಆರೋಪಿ ಹೇಳಿದ್ದಾನೆ. ಆದಾಗ್ಯೂ, ಅವರ ಮಾವ ಪಶ್ಚಾತ್ತಾಪ ಪಡಲು ಸಿದ್ಧರಿರಲಿಲ್ಲ ಎಂದು ಆರೋಪಿಯನ್ನು ಉಲ್ಲೇಖಿಸಿ ಅಧಿಕಾರಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next