Advertisement

ರಾಹುಲ್‌ ವಿರುದ್ಧ ಚೌಹಾಣ್‌ ಪುತ್ರನಿಂದ ಕ್ರಿಮಿನಲ್‌ ಮಾನಹಾನಿ ದಾವೆ

04:04 PM Oct 30, 2018 | Team Udayavani |

ಭೋಪಾಲ್‌ : ತನ್ನ ಹೆಸರು ಪನಾಮಾ ಪೇಪರ್‌ ಹಗರಣದಲ್ಲಿ ಕಾಣಿಸಿಕೊಂಡಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಪುತ್ರ ಕಾರ್ತಿಕೇಯ ಚೌಹಾಣ್‌ ಅವರು ಕ್ರಿಮಿನಲ್‌ ಮಾನಹಾನಿ ಕೇಸನ್ನು ದಾಖಲಿಸಿದ್ದಾರೆ. 

Advertisement

ಈ ನಡುವೆ ರಾಹುಲ್‌ ಗಾಂಧಿ ಅವರು ತಾನು ಚೌಹಾಣ್‌ ಅವರ ಪುತ್ರನ ಹೆಸರನ್ನು ಪನಾಮಾ ಪೇಪರ್‌ ಹಗರಣ ಸಂಬಂಧ ಉಲ್ಲೇಖೀಸಿರುವುದು ತನ್ನಲ್ಲಿನ ಗೊಂದಲದ ಪರಿಣಾಮವಾಗಿದೆ ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ ಜಬುವಾ ಜಿಲ್ಲೆಯಲ್ಲಿಂದು ರಾಹುಲ್‌ ಗಾಂಧಿ ಅವರು ಚುನಾವಣಾ ಭಾಷಣ ಕಾರ್ಯಕ್ರಮದಲ್ಲಿ  ಮಾಮಾಜಿ ಪುತ್ರನ ಹೆಸರು ಪನಾಮಾ ಪೇಪರ್‌ ಹಗರಣದಲ್ಲಿ ಕಾಣಿಸಿಕೊಂಡಿರುವ ಹೊರತಾಗಿಯೂ ಆತನಿಗೆ ಏನೂ ಆಗಿಲ್ಲ; ಅಲ್ಲಿ ಚೌಕೀದಾರ್‌, ಇಲ್ಲಿ ಮಾಮಾಜಿ (ಸಿಎಂ ಚೌಹಾಣ್‌) ಎಂದು ಲೇವಡಿ ಮಾಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next