Advertisement

ಗುಂಪು ಥಳಿತಕ್ಕೆ ಗುರಿಯಾಗಿದ್ದ ಮೂವರನ್ನು ರಕ್ಷಿಸಿದ ಪೊಲೀಸರು

07:19 PM Jul 26, 2018 | Team Udayavani |

ಭೋಪಾಲ್‌ : ರಸ್ತೆ ದಾಟಲು ಬಾಲಕನಿಗೆ ನೆರವಾದ ಮೂವರನ್ನು ಮಕ್ಕಳ ಕಳ್ಳರೆಂದು ಶಂಕಿಸಿದ ಉದ್ರಿಕ್ತ ಗುಂಪಿನಿಂದ ಥಳಿತಕ್ಕೆ ಗುರಿಯಾಗುವುದನ್ನು ಪೊಲೀಸರು ಸಕಾಲದಲ್ಲಿ ತಪ್ಪಿಸಿದ ಘಟನೆ ವರದಿಯಗಿದೆ. 

Advertisement

ಈ ಘಟನೆ ಹನುಮಾನ್‌ಗಂಜ್‌ನಲ್ಲಿ ನಡೆಯಿತು. ಬಾಲಕನಿಗೆ ರಸ್ತೆ ದಾಟಲು ನೆರವಾದ ಮೂವರನ್ನು ಮಕ್ಕಳ ಕಳ್ಳರೆಂದು ಶಂಕಿಸಿದ ಸುಮಾರು 12ರಿಂದ 15 ಜನರಿದ್ದ ಗುಂಪು ಅವರ ಮೇಲೆ ಹಲ್ಲೆ ನಡೆಸುತ್ತಿತ್ತು. ಆಗ ಪೊಲೀಸರು ಸಕಾಲದಲ್ಲಿ ಮಧ್ಯಪ್ರವೇಶಿಸಿ ಹಲ್ಲೆಯನ್ನು ತಡೆದು ಆ ಮೂವರನ್ನು ರಕ್ಷಿಸಿದರು ಎಂದು ಇನ್ಸ್‌ಪೆಕ್ಟರ ಸುದೇಶ್‌ ತಿವಾರಿ ತಿಳಿಸಿದ್ದಾರೆ. 

ಪೊಲೀಸರಿಂದ ರಕ್ಷಿಸಲ್ಪಟ್ಟ ಮೂವರನ್ನು ಧನ ಸಿಂಗ್‌, ರಾಮ್‌ ಸ್ವರೂಪ್‌ ಸೇನ್‌ ಮತ್ತು ದಶರಥ ಆಹಿರ್ವಾರ್‌ ಎಂದು ಗುರುತಿಸಲಾಗಿದೆ. ಇವರು ಮದ್ಯದ ಅಮಲಿನಲ್ಲಿದ್ದರು ಎಂದು ತಿವಾರಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next