Advertisement

Bangalore: ಅಡುಗೆ ಅನಿಲ ಸೋರಿಕೆ ಮಾಡಿಕೊಂಡು ಮಗನೊಂದಿಗೆ ತಾಯಿ ಆತ್ಮಹತ್ಯೆಗೆ ಯತ್ನ

11:58 AM Jan 04, 2024 | Team Udayavani |

ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ತಾಯಿಯೊಬ್ಬಳು ತನ್ನ ಮಗನೊಂದಿಗೆ ಅಡುಗೆ ಅನಿಲ ಸೋರಿಕೆ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ವೈಟ್‌ ಫೀಲ್ಡ್‌ ಬಳಿಯ ನಾಗೊಂಡನಹಳ್ಳಿ ಬಳಿ ಬುಧವಾರ ನಡೆದಿದೆ.

Advertisement

ಈ ವಿಚಾರ ತಿಳಿದ ಅಗ್ನಿಶಾಮಕ ದಳ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆ ಯಲ್ಲಿ ಮನೆಯ ಬಾಗಿಲು ಮುರಿದು ತಾಯಿ ಮತ್ತು ಮಗನನ್ನು ರಕ್ಷಣೆ ಮಾಡಲಾಗಿದೆ. ನಾಗೊಂಡನಹಳ್ಳಿಯ ಅಪಾರ್ಟ್‌ ಮೆಂಟ್‌ವೊಂದರ ನಿವಾಸಿ ಪ್ರಭು ಎಂಬುವರ ಪತ್ನಿ ತಮಿಳು ಸೆಲ್ವಿ (37) ಮತ್ತು ಆಕೆಯ ಐದು ವರ್ಷದ ಪುತ್ರ ಅಶ್ವತ್ಥನನ್ನು ರಕ್ಷಿಸಲಾಗಿದೆ.

ತಮಿಳುನಾಡು ಮೂಲದ ಪ್ರಭು ಮತ್ತು ತಮಿಳು ಸೆಲ್ವಿ ದಂಪತಿ ಮಗನ ಜತೆ ಅಪಾರ್ಟ್‌ಮೆಂಟ್‌ ನಲ್ಲಿ ವಾಸವಾಗಿ ದ್ದಾರೆ. ಕಳೆದ ಎರಡು ದಿನಗಳಿಂದ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಅದರಿಂದ ಬೇಸರ ಗೊಂಡ ತಮಿಳು ಸೆಲ್ವಿ, ಬುಧವಾರ ಬೆಳಗ್ಗೆ 9 ಗಂಟೆಗೆ ಪತಿ ಕೆಲಸಕ್ಕೆ ಹೋದಾಗ, ಫ್ಲ್ಯಾಟ್‌ ಬಾಗಿಲು ಹಾಗೂ ಕಿಟಕಿಗಳನ್ನು ಲಾಕ್‌ ಮಾಡಿಕೊಂಡು, ಅಡುಗೆ ಸಿಲಿಂಡರ್‌ನ ಅನಿಲವನ್ನು ತಾನೇ ಸೋರಿಕೆ ಮಾಡಿಕೊಂಡಿದ್ದಾರೆ. ಕೆಲ ಹೊತ್ತಿನ ಬಳಿಕ ಮನೆಗೆ ಬಂದ ಪ್ರಭು, ಮನೆಯ ಕಾಲಿಂಗ್‌ ಬೆಲ್‌ ಒತ್ತಿದ್ದಾರೆ. ಆದರೆ, ಒಳಗಡೆಯಿಂದ ಯಾವುದೇ ಸ್ಪಂದನೆ ಬಂದಿಲ್ಲ. ಆ ನಂತರ ಪತ್ನಿಗೆ ಕರೆ ಮಾಡಿ ಬಾಗಿಲು ತೆರೆಯುವಂತೆ ಕೇಳಿ ದಾಗ, ಮಗನೊಂದಿಗೆ ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದೇವೆ ಎಂದು ಬೆದರಿಕೆ ಹಾಕಿದ್ದಾರೆ.

ಅದರಿಂದ ಗಾಬರಿಕೊಂಡ ಪ್ರಭು, ಸಮೀಪದ ಅಗ್ನಿಶಾಮಕ ದಳ ಕಚೇರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಮತ್ತು ಪೊಲೀಸ್‌ ಸಿಬ್ಬಂದಿ ಬಾಗಿಲು ಒಡೆದು ಇಬ್ಬರನ್ನು ರಕ್ಷಿಸಿದ್ದಾರೆ. ತಮಿಳು ಸೆಲ್ವಿ ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದರು ಎಂಬುದು ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next