Advertisement

ಕುತ್ತಿಗೆ ಹಿಸುಕಿ ತಾಯಿ ಹತ್ಯೆಗೈದ ಪುತ್ರರು

08:12 PM Mar 19, 2021 | Team Udayavani |

ಸಕಲೇಶಪುರ: ಗಿರಿವಿ ಇಟ್ಟಿದ್ದ ಚಿನ್ನಾಭರಣ ಬಿಡಿಸಿಕೊಡಲು ಕೇಳಿದ ವೃದ್ಧೆ ತಾಯಿಯನ್ನು ಮಕ್ಕಳಿಬ್ಬರು ಹತ್ಯೆ ಮಾಡಿರುವ ಪ್ರಕರಣ ಸಕಲೇಶಪುರ ತಾಲೂಕು ಕರಡಿಗಾಲದಲ್ಲಿ ನಡೆದಿದೆ.

Advertisement

ಕರಡಿಗಾಲದ ಪುಟ್ಟಸ್ವಾಮಿಗೌಡ ಮತ್ತು ತಂಗ್ಯಮ್ಮ ದಂಪತಿಗೆ ಹೇಮಂತ್‌, ಸುಬ್ರಹ್ಮಣ್ಯ ಮತ್ತು ರಾಜೇಗೌಡ ಎಂಬ ಮೂವರು ಗಂಡು ಮಕ್ಕಳಿದ್ದು, 5 ವರ್ಷಗಳ ಹಿಂದೆಯೇ ಜಮೀನು, ಮನೆ ವಿಭಾಗ ಮಾಡಿಕೊಂಡಿದ್ದರು. ಪತಿ ಪುಟ್ಟಸ್ವಾಮಿಗೌಡ ಮೃತಪಟ್ಟ ನಂತರ ತಂಗ್ಯಮ್ಮ ಮಗ ಹೇಮಂತ್‌ ಮನೆಯಲ್ಲಿ ವಾಸವಿದ್ದರು.

ಸುಬ್ರಮಣ್ಯ(47), ರಾಜೇಗೌಡ (50)ತಾಯಿಯ ಚಿನ್ನಾಭರಣ ಪಡೆದು ಗಿರಿವಿ ಇಟ್ಟಿದ್ದರು. ತನ್ನ ಚಿನ್ನಾಭರಣ ಬಿಡಿಸಿಕೊಡಬೇಕೆಂದು ತಂಗ್ಯಮ್ಮ ಒತ್ತಾಯ ಮಾಡುತ್ತಿದ್ದರು. ಮಂಗಳವಾರವೂ ಚಿನ್ನಾಭರಣಗಳನ್ನು ಗಿರವಿಯಿಂದ ಬಿಡಿಸಿಕೊಡಿ ಎಂದು ತನ್ನ ಮಕ್ಕಳಿಬ್ಬರನ್ನು ಒತ್ತಾಯ ಮಾಡಿದ್ದರಿಂದ ಸಿಟ್ಟಿಗೆದ್ದ ಸುಬ್ರಹ್ಮಣ್ಯ ಮತ್ತು ರಾಜೇಗೌಡ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ತಾಯಿಯ ಮೇಲೆ ಜಗಳ ತೆಗೆದು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ.

ಈ ಸಂಬಂಧ ಹೇಮಂತ್‌ ಅವರು ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next