Advertisement
ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಒಟ್ಟು 150 ಹಾಸಿಗೆಗಳಿದ್ದು,ಮಂಗಳವಾರ ಸಂಜೆಯ ವೇಳೆಗೆ ಕೇವಲ 10 ಬೆಡ್ ಮಾತ್ರ ಖಾಲಿ ಇದ್ದವು. 150 ಹಾಸಿಗೆಗಳ ಪೈಕಿ 50ಐಸಿಯು ಬೆಡ್ ಇದ್ದು, ಅಷ್ಟು ಸಹ ಭರ್ತಿಯಾಗಿವೆ. 55 ಆಕ್ಸಿಜನ್ ಬೆಡ್ ಇದ್ದು, ಎಲ್ಲವೂ ಭರ್ತಿಯಾಗಿವೆ. ಸಾಮಾನ್ಯ ಹಾಸಿಗೆಗಳ ಪೈಕಿ ಮಾತ್ರ 10 ಖಾಲಿಯಿವೆ.21 ವೆಂಟಿಲೇಟರ್ಗಳಿದ್ದು, 15 ಭರ್ತಿಯಾಗಿವೆ. 6ಮಾತ್ರ ಖಾಲಿಯಿವೆ.
Related Articles
Advertisement
ಕೋವಿಡ್ ಕೇಂದ್ರ: ನಗರದವೈದ್ಯಕೀಯ ಕಾಲೇಜುಬಳಿ ನಿರ್ಮಿಸುತ್ತಿರುವ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ 200 ಹಾಸಿಗೆಗಳ ಕೋವಿಡ್ ಕೇರ್ಕೇಂದ್ರ ತೆರೆಯಲು ಪರಿಶೀಲಿಸಲಾಗಿದೆ. 2 ವಾರಗಳಲ್ಲಿ ಕೋವಿಡ್ ಕೇರ್ ಕೇಂದ್ರಕ್ಕಾಗಿ 2 ಮಹಡಿಗಳನ್ನು ಬಿಟ್ಟುಕೊಡಲಾಗುತ್ತದೆ. ಅಲ್ಲಿಯವರೆಗೂ ಮೆಡಿಕಲ್ ಕಾಲೇಜಿನಲ್ಲಿರುವ ಆಡಿಟೋರಿಯಂ ಬಳಸಿಕೊಂಡು 150 ಹಾಸಿಗೆವುಳ್ಳ ಕೋವಿಡ್ ಕೇಂದ್ರ ಆರಂಭಿಸಲಾಗುತ್ತಿದೆ.
ಆಮ್ಲಜನಕ ಘಟಕ ಶೀಘ್ರದಲ್ಲೇ ಆರಂಭ
ಇನ್ನು ಜಿಲ್ಲಾಸ್ಪತ್ರೆ ಆವರಣದಲ್ಲಿ 6 ಸಾವಿರ ಲೀಟರ್ ಸಾಮರ್ಥ್ಯದ ಲಿಕ್ವಿಡ್ ಆಕ್ಸಿಜನ್ ಘಟಕ ಸ್ಥಾಪನೆಯಾಗಿದ್ದು, ಇನ್ನು ಸಹ ಕಾರ್ಯಾರಂಭ ಮಾಡಿಲ್ಲ. ಇದು ಕಾರ್ಯಾರಂಭವಾಗಿ ಇಲ್ಲಿಗೆ ಆಕ್ಸಿಜನ್ ಪೂರೈಕೆಯಾದರೆ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ನೀಗಲಿದೆ. ಸದ್ಯ ಸಿಲಿಂಡರ್ ಮೂಲಕ ಆಕ್ಸಿಜನ್ ಒದಗಿಸಲಾಗುತ್ತಿದೆ. ಸಿಲಿಂಡರ್ ಲೆಕ್ಕದಲ್ಲಿ ಹೇಳುವುದಾದರೆ ಈ ಘಟಕ ಒಟ್ಟು 660 ಸಿಲೆಂಡರ್ಗಳಲ್ಲಿ ಹಿಡಿಯುವ ಆಕ್ಸಿಜನ್ ಅನ್ನು ಇದೊಂದೇ ಘಟಕದಲ್ಲಿ ತುಂಬುವ ಸಾಮರ್ಥ್ಯದ ವ್ಯವಸ್ಥೆ ಮಾಡಲಾಗಿದೆ.
ಇದಲ್ಲದೇ,ವಾತಾವರಣ ದಲ್ಲಿನ ಆಮ್ಲಜನಕ ಬಳಸಿಕೊಂಡು ಸುಮಾರು 40 ರಿಂದ 50 ಜಂಬೊ ಸಿಲಿಂಡರ್ ಸಮನಾಗಿರುವ ಆಕ್ಸಿಜನ್ ಪೂರೈಕೆಗೆ, ಆಕ್ಸಿಜನ್ ಜನರೇಟರ್ ತಯಾರಿ ಮಾಡಲಾಗುತ್ತದೆ. 300 ಆಕ್ಸಿಜನ್ ಕಾನ್ಸ್ಟ್ರೇಟರ್ಗಳ ಖರೀದಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಪ್ರತಿ ಕಾನ್ಸ್ಟ್ರೇಟರ್ 6 ರಿಂದ 7 ಲೀಟರ್ ಆಕ್ಸಿಜನ್ ತಯಾರಿಸುತ್ತದೆ. ಈ ಆಮ್ಲಜನಕವನ್ನು 450 ಹಾಸಿಗೆಗಳಿಗೆ ಬಳಸಲು ಉದ್ದೇಶ ಹೊಂದಲಾಗಿದೆ.
ಆಕ್ಸಿಜನ್ ಪೂರೈಕೆಯಲ್ಲೂ ವ್ಯತ್ಯಯ
ಇನ್ನು ದೇಶದ ಎಲ್ಲ ಭಾಗದಲ್ಲೂ ಆಕ್ಸಿಜನ್ವ್ಯತ್ಯಯದಂತಹ ಸಮಸ್ಯೆ ಜಿಲ್ಲೆಯನ್ನೂಕಾಡುತ್ತಿದೆ. ಮೈಸೂರಿನಿಂದ ಜಂಬೋಸಿಲಿಂಡರ್ಗಳಿಗೆ ಆಕ್ಸಿಜನ್ ಭರ್ತಿಮಾಡಿಕೊಂಡು ಜಿಲ್ಲಾಸ್ಪತ್ರೆಗೆ ಪೂರೈಸುವ ಪ್ರಕ್ರಿಯೆಯಲ್ಲಿ ವ್ಯತ್ಯಯವಾಗುತ್ತಿದ್ದು, ಇನ್ನೊಂದು ಇದೇ ರೀತಿಯ ವಿಳಂಬವಾದರೆ ಆಕ್ಸಿಜನ್ ಮುಗಿಯುವ ಆತಂಕವೂ ಮನೆಮಾಡಿದೆ. ಮೈಸೂರಿನಿಂದ ಆಕ್ಸಿಜನ್ ತರಿಸಲಾಗುತ್ತಿದೆ. ಪ್ರತಿ ಬಾರಿ 100 ಸಿಲಿಂಡರ್ಗಳನ್ನಷ್ಟೇ ತರಲು ಸಾಧ್ಯ. ಹೀಗಾಗಿ ಪೂರೈಕೆಯಲ್ಲಿ ವಿಳಂಬವಾದರೆ ಅದರ ಅವಲಂಬನೆಯಲ್ಲಿರುವ ರೋಗಿಗಳಿಗೆ ಸಮಸ್ಯೆಯಾಗಬಹುದು ಎಂಬ ಆತಂಕ ಇದೆ.
ಆಕ್ಸಿಜನ್ಗಾಗಲಿ ಹಾಸಿಗೆಗಳ ವ್ಯವಸ್ಥೆಗಾಗಲೀ ಕೊರತೆ ಕಂಡುಬಂದಿಲ್ಲ. ಸೋಂಕಿತರ ಪೈಕಿ ತೀವ್ರತರ ಲಕ್ಷಣವುಳ್ಳ ಶೇ. 10ರಷ್ಟು ಸೋಂಕಿತರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಶೇ. 6 ರಷ್ಟು ಜನರಿಗೆಮಾತ್ರ ಆಕ್ಸಿಜನ್ ಅವಶ್ಯಕತೆ ಇದೆ. ಇವರಿಗೆಅಗತ್ಯವಿರುವ ಆಕ್ಸಿಜನ್ ಲಭ್ಯವಿದೆ.
- ಡಾ.ಎಂ.ಆರ್. ರವಿ, ಜಿಲ್ಲಾಧಿಕಾರಿ