Advertisement

ಸಮಸ್ಯೆಗಳ ಆಗರ ಕಮದಾಳ ಶಾಲೆ

01:05 PM Sep 15, 2017 | |

ದೇವದುರ್ಗ: ಬಿರುಕು ಬಿಟ್ಟು ಶಿಥಿಲಗೊಂಡ ಕಟ್ಟಡ, ಕೊಠಡಿ-ಶಿಕ್ಷಕರು-ಮೂಲ ಸೌಲಭ್ಯ ಕೊರತೆ, ಇರುವ ಒಂದು ಕೊಠಡಿಯಲ್ಲೇ ಬಸಿಯೂಟ ಸಾಮಗ್ರಿ ಸಂಗ್ರಹದ ಜೊತೆಗೆ 1ರಿಂದ 5ನೇ ತರಗತಿವರೆಗಿನ 30 ಮಕ್ಕಳಿಗೆ ಪಾಠ ಮಾಡಬೇಕಾದ ಅನಿವಾರ್ಯತೆ. ಇದು ತಾಲೂಕಿನ ಕಮದಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿನ ದುಸ್ಥಿತಿ.

Advertisement

ಕೊಪ್ಪರ್‌ ಕ್ಲಸ್ಟರ್‌ ವ್ಯಾಪ್ತಿಯ ಕಮದಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡಕ್ಕೆ ಇರುವುದೊಂದೇ ಕೊಠಡಿ. ಕಟ್ಟಡದ ಕಂಬ, ಮೇಲ್ಛಾವಣಿ, ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಬ್ಬಿಣದ ಸರಳುಗಳು ಕಾಣುತ್ತಿವೆ. ಈ ಕೊಠಡಿಯಲ್ಲೇ ಬಿಸಿಯೂಟ ಸಾಮಗ್ರಿ, ಸಿಲಿಂಡರ್‌ ಇಡಲಾಗಿದೆ. ಇನ್ನು ಶಾಲೆಯ ದಾಖಲೆಗಳನ್ನೂ ಇದರಲ್ಲೇ ಇಡಲಾಗಿದೆ.

ಉಳಿದ ಇಕ್ಕಟ್ಟಾದ ಜಾಗೆಯಲ್ಲಿ 1ರಿಂದ 5ನೇ ತರಗತಿವರೆಗಿನ ಸುಮಾರು 30 ಮಕ್ಕಳಿಗೆ ಶಿಕ್ಷಕರು ಪಾಠ ಮಾಡಬೇಕಿದೆ.
ಶಾಲೆಯಲ್ಲಿ 1ರಿಂದ 5ನೇ ತರಗತಿ ಇದ್ದರೂ ಕೇವಲ ಇಬ್ಬರೇ ಶಿಕ್ಷಕರಿದ್ದಾರೆ. ಇವರೇ ಬಿಸಿಯೂಟದ ಉಸ್ತುವಾರಿ, ಕಚೇರಿ ಕೆಲಸ-ಕಾರ್ಯ, ಮಕ್ಕಳಿಗೆ ಪಾಠ ಬೋಧನೆ ಮಾಡಬೇಕಿದೆ. ಶಾಲೆಯಲ್ಲಿ ಶೌಚಾಲಯವಿದ್ದರೂ ಬಳಸುವ ಸ್ಥಿತಿಯಲ್ಲಿಲ್ಲ. ಮಕ್ಕಳಿಗೆ ನೀರಿನ ಸೌಲಭ್ಯವಿಲ್ಲ. ವಿಷಯವಾರು ಇರಲಿ, ತರಗತಿವಾರು ಪಾಠ ಮಾಡಲು ಶಿಕ್ಷಕರೇ ಇಲ್ಲದಾಗಿದೆ. ಮಕ್ಕಳಿಗೆ ಆಟದ ಮೈದಾನ ಕೂಡ ಇಲ್ಲದಾಗಿದೆ. ಒಟ್ಟಾರೆ ಅವ್ಯವಸ್ಥೆಯ ಆಗರವಾಗಿರುವ ಈ ಶಾಲೆಯಲ್ಲಿ ಮಕ್ಕಳಿಗೆ ಎಂತಹ ಗುಣಮಟ್ಟದ ಶಿಕ್ಷಣ ಸಿಗಬಹುದು ಎಂಬ ಆತಂಕ ಪಾಲಕರನ್ನು ಕಾಡುತ್ತಿದೆ.

ಕಳೆದ ಮೂರು ವರ್ಷಗಳ ಹಿಂದೆ ಸರ್ವ ಶಿಕ್ಷಣ ಅಭಿಯಾನದಡಿ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಆಗಿತ್ತು. ಆದರೆ ಗ್ರಾಮಸ್ಥರು ಜಾಗೆ ನೀಡಲು ಮುಂದಾಗದ್ದರಿಂದ ಅನುದಾನ ವಾಪಸು ಹೋಗಿದೆ. ಕಳೆದ ವರ್ಷ ಇಲ್ಲಿದ್ದ ಇಬ್ಬರೂ ಶಿಕ್ಷಕಿಯರನ್ನು ವರ್ಗಾವಣೆ ಮಾಡಿದ್ದರಿಂದ ಗುಂಡುಗುರ್ತಿ ಶಾಲೆಯಿಂದ ಕಮದಾಳ ಶಾಲೆಗೆ ಎರವಲು ಸೇವೆಗೆ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಕಾಯಂ ಶಿಕ್ಷಕರ ಕೊರತೆ ಇದೆ.

ಸೋರುವ ಕಟ್ಟಡ: ಶಿಥಿಲಗೊಂಡ ಶಾಲಾ ಕೊಠಡಿ ಅಲ್ಪ ಮಳೆ ಬಂದರೂ ನೀರು ನಿಂತು ಸೋರುತ್ತದೆ. ಮಕ್ಕಳ ಸುರಕ್ಷತೆ ಜೊತೆಗೆ ಬಿಸಿಯೂಟ ಆಹಾರಧಾನ್ಯ, ಶಾಲಾ ದಾಖಲೆಗಳನ್ನು ರಕ್ಷಿಸಿಕೊಳ್ಳಲು ಶಿಕ್ಷಕರು ಪರದಾಡುವಂತಾಗಿದೆ.

Advertisement

ಈಗಾಗಲೇ ಶಿಕ್ಷಣ ಇಲಾಖೆಗೆ ಕಟ್ಟಡ ದುರಸ್ತಿಗೊಳಿಸಲು ಮನವಿ ಸಲ್ಲಿಸಲಾಗಿದೆ. ಸರಕಾರ ಅನುದಾನ ಮಂಜೂರು ಮಾಡುವವರೆಗೆ ಹಳೇ ಕಟ್ಟಡ ಗತಿಯಾಗಿದೆ. ಗ್ರಾಮಸ್ಥರು ಶಾಲಾ ಕಟ್ಟಡಕ್ಕೆ ಜಾಗೆ ಒದಗಿಸಿದ್ದರೆ ಮಕ್ಕಳಿಗೆ ಇಂತಹ ಸ್ಥಿತಿ ಬರುತ್ತಿರಲ್ಲಿ ಎನ್ನುತ್ತಾರೆ ಪಾಲಕರು.

ಯಮನಾಳದಲ್ಲೂ ಸಮಸ್ಯೆ: ಇದೇ ಕ್ಲಸ್ಟರ್‌ ವ್ಯಾಪ್ತಿಯ ಯಮನಾಳ ಶಾಲೆಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹತ್ತು ವರ್ಷಗಳಿಂದ ಭೂ ದಾನಿಗಳು ಅಧಿಕಾರಿಗಳ ಮಧ್ಯ ನಡೆಯುತ್ತಿರುವ ತಕರಾರಿನಿಂದಾಗಿ ಇಲ್ಲಿವರೆಗೆ ಒಂದು ಕೋಣೆ ಬಾಗಿಲು ತೆಗೆಯದೇ ಬೀಗ ಹಾಕಲಾಗಿದೆ. ಒಬ್ಬರೇ ಶಿಕ್ಷಕರು ಐದು ತರಗತಿ ಮಕ್ಕಳಿಗೆ ಪಾಠ ಹೇಳಲು ತೀರ ಕಷ್ಟವಾಗಿದೆ. ಪ್ರತಿವರ್ಷ ಅತಿಥಿ ಶಿಕ್ಷಕರನ್ನು ನಿಯೋಜನೆ ಮಾಡುವುದರಿಂದ ಸ್ವಲ್ಪ ವಿರಾಳ ಎನ್ನುವಂತಾಗಿದೆ. ಗ್ರಾಮದಲ್ಲಿ ಶಾಲೆಗಳು ಆರಂಭವಾದಾಗ ನಿರ್ಮಿಸಿದ ಶಾಲಾ ಕಟ್ಟಡ ಶಿಥಿಲಗೊಂಡಿದೆ.

ಇನ್ನಾದರೂ ಶಿಕ್ಷಣ ಇಲಾಖೆ ಶಾಲಾ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು. ಗ್ರಾಮಸ್ಥರು ಜಾಗೆ ಒದಗಿಸಬೇಕಿ¨
ನಾಗರಾಜ ತೇಲ್ಕರ್‌.

Advertisement

Udayavani is now on Telegram. Click here to join our channel and stay updated with the latest news.

Next