Advertisement

ನೈತಿಕ ಪೊಲೀಸ್‌ಗಿರಿ: ಒಬ್ಬನ ಬಂಧನ

01:03 AM Sep 03, 2021 | Team Udayavani |

ಕೊಲ್ಲಂ (ಕೇರಳ): ಕೊಲ್ಲಂನ ಪರವೂರ್‌ ಬೀಚ್‌ ರಸ್ತೆಯಲ್ಲಿ ಕಾರಿನಲ್ಲಿ ಆಹಾರ ಸೇವಿಸುತ್ತಿದ್ದ ತಾಯಿ ಮತ್ತು ಮಗನ ಮೇಲೆ ಹಲ್ಲೆ ನಡೆಸಲಾಗಿದೆ.

Advertisement

ಆಶಿಷ್‌ ಎಂಬಾತ ಈ ಸಂದರ್ಭದಲ್ಲಿ ಅಶ್ಲೀಲ ಸನ್ನೆ ಮಾಡಿದ್ದಾನೆ.  ಅದನ್ನು ಪ್ರಶ್ನಿಸುವುದ ಕ್ಕಾಗಿ ಕಾರಿನಿಂದ ಇಳಿದ ಮಗನಿಗೆ ಆಶಿಷ್‌ ಥಳಿಸಿದ್ದಾನೆ. ಅದನ್ನು ತಡೆಯಲು ಹೋದ ತಾಯಿಗೂ ಪೆಟ್ಟು ಬಿದ್ದಿತ್ತು. ಆ.30ರಂದು ನಡೆದಿದ್ದ ಪ್ರಕರಣಕ್ಕೆ ಭಾರೀ ಖಂಡನೆ ವ್ಯಕ್ತವಾಗಿತ್ತು. ಪರವೂರ್‌ ಪೊಲೀಸ್‌ ಠಾಣೆಯಲ್ಲಿ ತಾಯಿ-ಮಗ ಕೂಡಲೇ ದೂರು ದಾಖಲಿಸಿದ್ದಾರೆ.

ಸೆ.1ರಂದು ತಮಿಳುನಾಡಿಗೆ ಪರಾರಿ ಯಾಗಲು ಹೊರಟಿದ್ದ ಆಶೀಷ್‌ನನ್ನು ಬಂಧಿಸಲಾಗಿದೆ. ಪೊಲೀಸರು ಘಟನೆ ಯನ್ನು ಪರಿಶೀಲಿಸಿ, ಅದೊಂದು ನೈತಿಕ ಪೊಲೀಸ್‌ಗಿರಿಯನ್ನು ಹೋಲುವ ಘಟನೆಯಂತಿದೆ ಎಂದಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next