Advertisement

ಮೂಡಬಿದಿರೆ: ಡೆತ್‌ ನೋಟ್‌ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

12:03 PM Jan 26, 2018 | Team Udayavani |

ಮೂಡಬಿದಿರೆ: ಅನಾರೋಗ್ಯದಿಂದ ಓದಿನಲ್ಲಿ ಹಿನ್ನಡೆ ಯಾಗುತ್ತಿದೆ ಎಂಬ ಖನ್ನತೆಯಿಂದ  ಪಿಯುಸಿ ವಿದ್ಯಾರ್ಥಿನಿಯೋರ್ವಳು ತರಗತಿ ಕಟ್ಟಡದ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಭವಿಸಿದೆ.

Advertisement

ಚಿತ್ರದುರ್ಗ ಮೂಲದ ಮಂಜು ನಾಥ್‌ ಅವರ ಪುತ್ರಿ ರಚನಾ  ಮೃತ ಪಟ್ಟವರು.ತರಗತಿಗೆ ರಜೆಯಿದ್ದರೂ   ಲೈಬ್ರೆರಿಗೆ ಬಂದಿದ್ದ  ಆಳ್ವಾಸ್‌ ಪ.ಪೂ. ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ರಚನಾ ರಕ್ತ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ತೀವ್ರವಾಗಿ ನೊಂದುಕೊಂಡಿದ್ದರು ಎನ್ನಲಾಗಿದೆ. 

ಇದೇ ಒತ್ತಡದಿಂದ  ಕಳೆದ ಪ್ರಾಯೋಗಿಕ ಪರೀಕ್ಷೆಗಳಲ್ಲಿಯೂ ಸಾಧನೆ ಮಾಡಲಾಗಲಿಲ್ಲ ಎನ್ನುವ ಕೊರಗು ಕೂಡ ಆಕೆಗಿದ್ದು, ಈ ಬಗ್ಗೆ ಡೆತ್‌ ನೋಟ್‌ ಬರೆದಿಟ್ಟು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೂಡಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next