Advertisement

ಹಿಂದುಳಿದ ವರ್ಗಗಳ ವಿಭಾಗದ ಮಾಸಿಕ ಸಭೆ

12:38 PM Jan 25, 2018 | Team Udayavani |

ಮಹಾನಗರ: ಜಿಲ್ಲಾ ಕಾಂಗ್ರೆಸ್‌ ಇತರ ಹಿಂದುಳಿದ ವರ್ಗಗಳ ವಿಭಾಗದ ಮಾಸಿಕ ಸಭೆಯು ಇತ್ತೀಚೆಗೆ ಜರಗಿತು. ರಾಜ್ಯ ಒ.ಬಿ.ಸಿ. ಘಟಕದ ಪ್ರ. ಕಾರ್ಯದರ್ಶಿ ಸದಾಶಿವ ಉಳ್ಳಾಲ್‌ ಮಾತನಾಡಿ, ಮುಂಬರುವ ಚುನಾವಣೆಗೆ ಯಾವ ರೀತಿಯಲ್ಲಿ ಕಾರ್ಯಸನ್ನದ್ಧರಾಗಬೇಕು ಮತ್ತು ಜಿಲ್ಲಾ ಮಟ್ಟದ ಹಾಗೂ ರಾಜ್ಯಮಟ್ಟದ ಸಮಾವೇಶ ಮಾಡಲು ಪೂರ್ವ ತಯಾರಿ ಮಾಡುವ ಬಗ್ಗೆ ತಿಳಿಸಿದರು.

Advertisement

ಪಕ್ಷ ಸಂಘಟನೆಗೆ ಪಣ
ಒ.ಬಿ.ಸಿ. ಜಿಲ್ಲಾಧ್ಯಕ್ಷ ಧರಣೇಂದ್ರ ಕುಮಾರ್‌ ಅವರು ಮಾತನಾಡಿ, ಹಿಂದುಳಿದ ವರ್ಗಗಳ ಘಟಕವು ಮುಂಬರುವ ಚುನಾವಣೆಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಮಗದೊಮ್ಮೆ ಜಿಲ್ಲೆಯಲ್ಲಿ ಕಾಂಗ್ರೆಸ್‌ ಆಡಳಿತ ಬರುವಂತೆ ಶ್ರಮಿಸಬೇಕು ಎಂದು ಹೇಳಿದರು.

ಖಂಡನೆ
ಬಿಲ್ಲವ ಸಮುದಾಯದ ಕಾರಣಿಕ ದೈವವಾದ ಕೋಟಿ-ಚೆನ್ನಯರ ಭಾವ ಚಿತ್ರವನ್ನು ಬಿಜೆಪಿಯವರು ತಮ್ಮ ಪಕ್ಷದ
ಪ್ರಣಾಳಿಕೆ ಸಭೆಯ ಬ್ಯಾನರ್‌ನಲ್ಲಿ ಮಾತ್ರ ಸೀಮಿತವಾಗಿಸಿಕೊಂಡು ಸಮುದಾಯದ ಯುವಕರನ್ನು ದಿಕ್ಕು ತಪ್ಪಿಸಿ ಅಪರಾಧಿ ಕೃತ್ಯಗಳಲ್ಲಿ ತೊಡಗುವಂತೆ ಪ್ರೇರೇಪಿಸಿ ಜೈಲುಪಾಲಾಗುವಂತೆ ಮಾಡುತ್ತಾರೆ. ಇದನ್ನು ಹಿಂದುಳಿದ ವರ್ಗದ ಜನರು ಖಂಡಿಸುತ್ತೇವೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಕೆ. ಹರೀಶ್‌ ಕುಮಾರ್‌ ಇವರು ಸೂಕ್ತ ಸಲಹೆಗಳನ್ನು ನೀಡಿದರು. ಉಳ್ಳಾಲ ಬ್ಲಾಕ್‌ನ ಗ್ರಾಮ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆದೇಶ ಪತ್ರವನ್ನು ಬ್ಲಾಕ್‌ನ ಅಧ್ಯಕ್ಷ ದಿನೇಶ್‌ ಕುಂಪಲ ಅವರು ಬಿಡುಗಡೆ ಮಾಡಿದರು.

ಜಿಲ್ಲಾ ವೀಕ್ಷಕರಾದ ರಾಜೇಶ್‌ ಬಾಳೆಕಾರ್‌ ಬಿ.ಬಿ.ಸಿ. ರಾಜ್ಯ ಕಾರ್ಯದರ್ಶಿ ನೀಲಯ್ಯ ಅಗರಿ, ಜಿಲ್ಲಾ ವಕ್ತಾರ ಗಣೇಶ್‌
ಪೂಜಾರಿ, ಬ್ಲಾಕ್‌ ಅಧ್ಯಕ್ಷ ಪ್ರಕಾಶ್‌ ಸಾಲ್ಯಾನ್‌, ವಿಜಯಕುಮಾರ್‌ ಕಡೇ ಶಿವಾಲಯ, ಮೋಹಿನಿ ಗಟ್ಟಿ, ವಿಶ್ವನಾಥ ಕೋಟ್ಯಾನ್‌, ಪದ್ಮ ಕುಮಾರ್‌, ಜನಾರ್ದನ ಪೂಜಾರಿ, ಪದ್ಮನಾಭ ಕುಂಪಲ, ಜಿಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಶೋಭಾ ಕೇಶವ್‌ ನಿರೂಪಿಸಿದರು. ಸುಂದರ ಸಿ. ಪೂಜಾರಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next