Advertisement

ಮುಂಗಾರು ಬಿತ್ತನೆ ಕಾರ್ಯ ಚುರುಕು

08:03 AM Jun 17, 2020 | Suhan S |

ಚಿಂಚೋಳಿ: ತಾಲೂಕಿನ ಅನೇಕ ಗ್ರಾಮಗಳಲ್ಲಿ ಮಂಗಳವಾರ ಬೆಳಗ್ಗೆಯಿಂದ ಮಳೆ ಸುರಿಯುತ್ತಿರುವುದರಿಂದ ಬಿತ್ತನೆ ಮಾಡಿದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

Advertisement

ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಜೂನ್‌ ಮೊದಲ ವಾರದಲ್ಲಿ ಸಾಧಾರಣ ಮಳೆ ಆಗಿರುವುದರಿಂದ ರೈತರು ತೊಗರಿ, ಹೆಸರು, ಉದ್ದು, ಹೈಬ್ರಿಡ್‌ ಜೋಳ, ನವಣಿ, ಸಜ್ಜೆ ಬಿತ್ತನೆ ಮಾಡಿದ್ದರು. ಆದರೆ ಕಳೆದ ಒಂದು ವಾರದಿಂದ ಮಳೆ ಆಗದೆ ಕೇವಲ ಒಣ ಹವೆ ಮತ್ತು ಬಿಸಿಲಿನ ತಾಪ ಹೆಚ್ಚುತ್ತಿರುವುದರಿಂದ ರೈತರ ಮೊಗದಲ್ಲಿ ಆತಂಕವನ್ನುಂಟು ಮಾಡಿತ್ತು. ಮಂಗಳವಾರ ತಾಲೂಕಿನಲ್ಲಿ ಮುಂಜಾನೆಯಿಂದಲೇ ಮಳೆ ಬೀಳುತ್ತಿರುವುದರಿಂದ ರೈತರಿಗೆ ಸಂತಸವನ್ನುಂಟು ಮಾಡಿದೆ.

ತಾಲೂಕಿನಲ್ಲಿ ಇಗಾಗಲೇ ಹಸರಗುಂಡಗಿ, ರುಮ್ಮನಗೂಡ, ಐನಾಪುರ, ಚಿಮ್ಮನಚೋಡ, ಕುಂಚಾವರಂ, ಸುಲೇಪೇಟ, ಕೋಡ್ಲಿ, ಚಿಂಚೋಳಿ ಸಾಲೇಬೀರನಳ್ಳಿ, ಗಡಿಕೇಶ್ವರ, ಮೋಘಾ, ಚಂದನಕೇರಾ, ವೆಂಕಟಾಪುರ, ಮಿರಿಯಾಣ, ರಟಕಲ್‌, ಕನಕಪುರ ಗ್ರಾಮಗಳಲ್ಲಿ ಬಿತ್ತನೆ ಆಗಿದೆ. ಕೆಲವು ಗ್ರಾಮಗಳಲ್ಲಿ ಬಿತ್ತನೆ ಮಾಡಿದ ತೊಗರಿ, ಹೆಸರು, ಉದ್ದು ಮೊಳಕೆಯೊಡಿದೆ. ತಾಲೂಕಿನ ಸುಲೇಪೇಟ, ಕೊರವಿ, ನಿಡಗುಂದಾ, ಚಿಂಚೋಳಿಯಲ್ಲಿ ಬಿರುಸಿನ ಮಳೆ ಆಗಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿತ್ತು.

ವ್ಯಾಪಕವಾಗಿ ಮಳೆ ಸುರಿಯುತ್ತಿರುವುದರಿಂದ ಸಣ್ಣಪುಟ್ಟ ನಾಲಾಗಳಲ್ಲಿ ಮಳೆ ನೀರು ಹರಿಯುತ್ತಿತ್ತು. ತಾಲೂಕಿನಲ್ಲಿ ಬಿತ್ತನೆ ಕಾರ್ಯ ಚುರುಕಿನಿಂದ ನಡೆಯುತ್ತಿದ್ದು ಮಳೆ ಬೀಳುತ್ತಿರುವುದರಿಂದ ಮುಂಗಾರಿನ ಬಿತ್ತನೆಗೆ ಉತ್ತಮವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next