Advertisement
ಗುರುವಾರ ರಾತ್ರಿಯೇ ಮೃಗಶಿರ ಮಳೆಯ ಆಗಮನ ವಾಸನೆ ಎಂಬಂತೆ ಮೋಡ ಕವಿದುಕೊಂಡಿದ್ದ ವಾತಾವರಣ ಶುಕ್ರವಾರ ಬೆಳಗ್ಗೆ ಮಳೆ ರೂಪದಲ್ಲಿ ನೆಲಕ್ಕೆ ಇಳಿದಿತ್ತು. ಮುಂಗಾರು ಪೂರ್ವ ಸುರಿದಿದ್ದ ಮಳೆಯಿಂದ ಅದಾಗಲೇ ಕೊಂಚ ತಣಿದಿದ್ದ ಜಮೀನುಗಳಲ್ಲಿ ಶುಕ್ರವಾರದ ಮಳೆ ಬಹುತೇಕ ಭೂಮಿಯನ್ನು ತಣ್ಣಗಾಗಿಸಿದೆ.
ಮಳೆಯಲ್ಲೂ ಮನೆಯಿಂದ ಹೊರ ಬಂದವರು, ಶಾಲೆಗೆ ಹೊರಟು ನಿಂತ ಮಕ್ಕಳು, ಕಚೇರಿಗೆ ಹೊರಟ ಅಧಿಕಾರಿ,
ಸಿಬ್ಬಂದಿ, ಹೊಟ್ಟೆ ಪಾಡಿನ ಅನಿವಾರ್ಯಕ್ಕೆ ಬೀದಿಗೆ ಇಳಿಯಲೇಬೇಕಾದ ಜನರೆಲ್ಲ ಛತ್ರಿಗಳನ್ನು ಹಿಡಿದು ಮಳೆಯಲ್ಲೂ ಮಂದಹಾಸದಿಂದಲೇ ಓಡಾಡುತ್ತಿದ್ದರು. ಮಳೆಯಿಂದ ರಕ್ಷಿಸಿಕೊಳ್ಳಲು ಛತ್ರಿ ಹಿಡಿದೇ ಓಡಾಡುತ್ತಿದ್ದ ದೃಶ್ಯ, ಸೋನೆ ಮಳೆಗೆ ರಸ್ತೆಯಲ್ಲಿ ಹರಿಯುತ್ತಿದ್ದ ತಿಳಿ ನೀರಿನ ಝರಿಗಳು ಮಲೆನಾಡಿನ ಮಳೆಗಾಲದ ಹಿತಾನುಭವ ನೀಡಿತ್ತು