Advertisement

Kerala ಪ್ರವೇಶಿಸಿದ ಮುಂಗಾರು; ವಾರದೊಳಗೆ ರಾಜ್ಯ ಕರಾವಳಿಗೆ ಆಗಮನ

11:43 PM May 30, 2024 | Team Udayavani |

ಮಂಗಳೂರು/ಉಡುಪಿ: ಕೇರಳ ಕರಾವಳಿ ತೀರಕ್ಕೆ ಗುರುವಾರ ಮುಂಗಾರು ಪ್ರವೇಶಿಸಿದ್ದು, ವಾರದೊಳಗೆ ರಾಜ್ಯ ಕರಾವಳಿಗೆ ಆಗಮಿಸುವ ನಿರೀಕ್ಷೆ ಇದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆಯ ಪ್ರಕಾರ ಜೂನ್‌ 5ರಂದು ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದ್ದು ಪರಿಣಾಮ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಲಿದೆ.

Advertisement

ಐಎಂಡಿ ಮಾಹಿತಿಯಂತೆ ಮೇ 31ರಿಂದ ಜೂನ್‌ 3ರ ವರೆಗೆ “ಎಲ್ಲೋ ಅಲರ್ಟ್‌’ ಘೊಷಿಸಲಾಗಿದೆ. ಈ ವೇಳೆ ಗುಡುಗು ಸಹಿತ ಉತ್ತಮ ಮಳೆಯಾಗಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುರುವಾರ ಬಿಟ್ಟು ಬಿಟ್ಟು ಮಳೆಯಾಗಿದೆ. ಸುಬ್ರಹ್ಮಣ್ಯ, ಬಂಟ್ವಾಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿರುಸಿನ ಮಳೆಯಾಗಿತ್ತು. ಉಳಿದಂತೆ ಜಿಲ್ಲೆಯಾದ್ಯಂತ ಸೆಕೆ ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು.

ಉಡುಪಿ ಜಿಲ್ಲೆಯ ಹಲವೆಡೆ ಬುಧವಾರ ತಡರಾತ್ರಿ, ಗುರುವಾರ ಸಾಧಾರಣ ಮಳೆ ಸುರಿದಿದೆ. ಕಾರ್ಕಳ, ಕಾಪು ಭಾಗದಲ್ಲಿ ಉತ್ತಮ ಮಳೆಯಾಗಿದೆ. ಉಡುಪಿ, ಮಣಿಪಾಲ, ಮಲ್ಪೆ ಪರಿಸರದಲ್ಲಿ ಬಿಸಿಲು-ಮೋಡ ಕವಿದ ವಾತಾವರಣದ ನಡುವೆ ಸ್ವಲ್ಪಕಾಲ ಸಣ್ಣದಾಗಿ ಮಳೆಯಾಗಿದೆ. ಮುಂದಿನ ನಾಲ್ಕು ದಿನಗಳ ಜಿಲ್ಲೆಯಲ್ಲಿ ಮಳೆಯಾಗುವ ಬಗ್ಗೆ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಂಗಳೂರಿನಲ್ಲಿ 32.7 ಡಿ.ಸೆ. ಗರಿಷ್ಠ ತಾಪಮಾನ ಮತ್ತು 25.4 ಡಿ.ಸೆ. ಕನಿಷ್ಠ ತಾಪಮಾನ ಇತ್ತು.

ಉಳ್ಳಾಲ ಕಡಲ್ಕೊರೆತ
ಉಳ್ಳಾಲ: ಉಚ್ಚಿಲ ಬಟ್ಟಪ್ಪಾಡಿಯಲ್ಲಿ ಸಮುದ್ರದ ಅಲೆಗಳು ಮನೆಗಪ್ಪಳಿಸುತ್ತಿದ್ದು 2 ಮನೆಗಳು ಅಪಾಯದಲ್ಲಿವೆ. ಸೋಮೇಶ್ವರ ದೇವಸ್ಥಾನದಿಂದ ಬೀಚ್‌ಗೆ ಇಳಿದು ಹೋಗುವ ಮೆಟ್ಟಿಲಿಗೆ ಕಡಲ್ಕೊರೆತದಿಂದ ಅಲ್ಪ ಪ್ರಮಾಣದ ಹಾನಿಯಾಗಿದೆ.

Advertisement

ಮರವಂತೆಯಲ್ಲಿ ಕಡಲ್ಕೊರೆತ
ಕುಂದಾಪುರ: ಮುಂಗಾರು ಪೂರ್ವ ಮಳೆಯಿಂದಾಗಿ ಕಡಲು ಪ್ರಕ್ಷುಬ್ಧಗೊಂಡಿದ್ದು, ಮರವಂತೆಯಲ್ಲಿ ಗುರುವಾರ ಕಡಲಬ್ಬರ ಬಿರುಸಾಗಿತ್ತು. ಗಾಳಿಯ ತೀವ್ರತೆಯೂ ಜೋರಾಗಿತ್ತು. ಇಲ್ಲಿನ ಮೀನುಗಾರಿಕೆ ಹೊರಬಂದರಿನ ತಡೆಗೋಡೆಗೆ ಭಾರೀ ಗಾತ್ರದ ಅಲೆಗಳು ಬಂದು ಅಪ್ಪಳಿಸುತ್ತಿರುವುದು ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next