Advertisement

ಹಣ ಬಲವೋ,ಜನ ಬಲವೋ,ನೋಡಿಯೇ ಬಿಡುತ್ತೇವೆ

09:16 AM May 12, 2019 | Vishnu Das |

ಹುಬ್ಬಳ್ಳಿ: ಈ ಬಾರಿ ಕುಂದಗೋಳಪಚುನಾವಣೆಯಲ್ಲಿ ಹಣ ಬಲವೋ, ಜನ ಬಲವೋ , ನೋಡೆ ಬಿಡುತ್ತೇವೆ ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು ಸವಾಲು ಹಾಕಿದ್ದಾರೆ.

Advertisement

ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ್ರ ಪರ ಕುಂದಗೋಳದಲ್ಲಿ ಪ್ರಚಾರ ನಿರತರಾಗಿದ್ದ ವೇಳೆ ಸುದ್ದಿಗಾರರೊಂದಿಗೆಮಾತನಾಡಿದ ಅವರು , ಸಚಿವ ಡಿ.ಕೆ.ಶಿವಕುಮಾರ್‌ ಅವರು ಕ್ಷೇತ್ರದ ಉಸ್ತುವಾರಿ ವಹಿಸಿ ಹಣ ಹಂಚುತ್ತಿದ್ದಾರೆ. ನಾವು ನೋಡಿಯೇ ಬಿಡುತ್ತೇವೆ. ಡಿ.ಕೆ.ಶಿವಕುಮಾರ್‌ ಅವರ ಹಣ ಬಲ ಗೆಲ್ಲುತ್ತದೋ,ಚಿಕ್ಕನ ಗೌಡ್ರ ಜನ ಬಲ ಗೆಲ್ಲುತ್ತದೋ ಎಂದರು.

ಆಡಳಿತ ಪಕ್ಷದ ಶಾಸಕರಲ್ಲೇ ಈ ದರಿದ್ರ ಸರ್ಕಾರ ಹೊದರೆ ಸಾಕು ಅಂತಾ ಇದೆ. ನಾವೇನು ಆಪರೇಷನ್‌ ಕಮಲವಾಗಲಿ ಏನನ್ನೂ ಮಾಡುತ್ತಿಲ್ಲ. ಎಲ್ಲವನ್ನ ಗಮನಿಸಿದರೆ ಭಾರತೀಯ ಜನತಾ ಪಕ್ಷದ ಸರ್ಕಾರ ಅಸ್ಥಿತ್ವಕ್ಕೆ ಬರುವುದು ಖಚಿತ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next