Advertisement

Mollywood ನ್ಯಾ| ಹೇಮಾ ಸಮಿತಿ ವರದಿ ಬಿಡುಗಡೆ ತಡವೇಕೆ?: ನಡ್ಡಾ

01:30 AM Sep 02, 2024 | Team Udayavani |

ಪಾಲಕ್ಕಾಡ್‌: ಕೇರಳದಲ್ಲಿ ಮಿ ಟೂ ಆರೋಪಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಹೇಮಾ ಸಮಿತಿ ವರದಿ ಬಿಡುಗಡೆಗೆ ರಾಜ್ಯ ಸರಕಾರ ವಿಳಂಬ ಮಾಡುತ್ತಿರುವುದೇಕೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರಶ್ನಿಸಿದ್ದಾರೆ.
ಇಲ್ಲಿ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀವು (ರಾಜ್ಯ ಸರಕಾರ) ಯಾಕೆ ಹೇಮಾ ಸಮಿತಿ ವರದಿ ಬಿಡುಗಡೆ ಮಾಡುತ್ತಿಲ್ಲ. ಬಿಡುಗಡೆ ಮಾಡದಂತೆ ನಿಮ್ಮನ್ನು ತಡೆಯುತ್ತಿರುವುದೇನು?, ನೀವು ಇದರ ಭಾಗವಾಗಿರುವ ಕಾರಣದಿಂದಲೇ ಬಿಡುಗಡೆಗೆ ಹಿಂಜರಿ­ಯುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಎಲ್‌ಡಿಎಫ್, ಯುಡಿಎಫ್ ಪಕ್ಷಗಳು ರಾಜ್ಯವನ್ನು ಹಾಳು ಮಾಡುತ್ತಿವೆ. ಇವೆರಡು ಒಂದೇ ನಾಣ್ಯದ 2 ಮುಖಗಳು ಎಂದಿದ್ದಾರೆ.

Advertisement

ನಡ್ಡಾ-ಭಾಗವತ್‌ ಭೇಟಿ: ಕುತೂಹಲ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರನ್ನು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ಮಾಡಿದ್ದಾರೆ. ಇಬ್ಬರು ನಾಯಕರು ಸುಮಾರು 30 ನಿಮಿಷ ಸಭೆ ನಡೆ­ಸಿದ್ದು, ಕುತೂಹಲಕ್ಕೆ ಕಾರಣ­ವಾ­ಗಿದೆ. ಲೋಕಸಭೆ ಚುನಾವಣೆ ವೇಳೆ ಬಿಜೆಪಿಗೆ ಆರ್‌ಎಸ್‌ಎಸ್‌ನ ಅಗತ್ಯವಿಲ್ಲ ಎಂದು ನಡ್ಡಾ ಹೇಳಿದ ಬಳಿಕ ಮೊದಲ ಭೇಟಿ ಇದಾಗಿದೆ. ಉಭಯ ನಾಯಕರು ರಾಷ್ಟ್ರೀಯ ಹಿತಾಸಕ್ತಿ ವಿಷಯಗಳ ಬಗ್ಗೆ ಚರ್ಚಿಸಿರಬಹುದು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next