Advertisement

ಸೋಂಕು ತಡೆ ಸುರಂಗ ಮಾರ್ಗ

06:01 PM Apr 15, 2020 | Naveen |

ಮೊಳಕಾಲ್ಮೂರು: ಪಟ್ಟಣ ವ್ಯಾಪ್ತಿಯ ಎದ್ದುಲಬೊಮ್ಮಯ್ಯನಹಟ್ಟಿ ಗಡಿಭಾಗದಲ್ಲಿ ಕೇವಿಡ್‌ – 19 ಸೋಂಕು ನಿವಾರಕ ಸಿಂಪಡಣೆಯ ಸುರಂಗ ಮಾರ್ಗಕ್ಕೆ ತಹಶೀಲ್ದಾರ್‌ ಎಂ.ಬಸವರಾಜ್‌ ಚಾಲನೆ ನೀಡಿದರು.

Advertisement

ನಂತರ ಮಾತನಾಡಿದ ಅವರು, ಕೋವಿಡ್‌ -19 ಹರಡದಂತೆ ಮುಂಜಾಗ್ರತೆಗಾಗಿ ಆಂಧ್ರದ ಗಡಿಯಿಂದ ಬರುವ ವಾಹನಗಳಿಗೆ ಸೋಂಕು ನಿವಾರಕ ಸಿಂಪಡಣೆಯ ಮಾರ್ಗವನ್ನು 2 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದರು.

ಇ.ಒ ಪ್ರಕಾಶ್‌, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಪ್ರೇಮನಾಥ್‌, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿ ಕಾರಿ ಟಿ.ಗುರುಮೂರ್ತಿ, ಸ.ನೌ. ಸಂಘದ ಗೌರವಾಧ್ಯಕ್ಷ ಕೆ.ಎಚ್‌. ಸಣ್ಣಯಲ್ಲಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next